
ಷಷ್ಠಿಪೂರ್ತಿ (೬೦ನೇ ಹುಟ್ಟುಹಬ್ಬ) ಹಾರ್ದಿಕ ಶುಭಾಶಯಗಳು 🌸
ಆರೋಗ್ಯ, ಐಶ್ವರ್ಯ, ಶಾಂತಿ ಮತ್ತು ಸಂತೋಷಗಳಿಂದ ಕೂಡಿದ ದೀರ್ಘಾಯುಷ್ಯ ನಿಮ್ಮದಾಗಲಿ.
ಇದುವರೆಗೆ ನೀವು ಕಟ್ಟಿಕೊಂಡು ಬಂದ ಸತ್ಕಾರ್ಯಗಳು, ಸಂಸ್ಕಾರಗಳು ಹಾಗೂ ಸಮಾಜಮುಖಿ ಬದುಕು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ.
ನಿಮ್ಮ ಜೀವನಯಾನದಲ್ಲಿ ಪ್ರತಿಯೊಂದು ಹೆಜ್ಜೆಯೂ ಸಾರ್ಥಕವಾಗಲಿ,
ಕುಟುಂಬದವರ ಪ್ರೀತಿ, ಬಂಧುಮಿತ್ರರ ಆತ್ಮೀಯತೆ ಸದಾ ನಿಮ್ಮೊಂದಿಗೆ ಇರಲಿ.
ಪರಮಾತ್ಮರು ನಿಮಗೆ ಉತ್ತಮ ಆರೋಗ್ಯ, ಮನಸ್ಸಿನ ನೆಮ್ಮದಿ ಹಾಗೂ ಸದಾ ಹರ್ಷಭರಿತ ಜೀವನವನ್ನು ನೀಡಲಿ ಎಂಬುದು ನಮ್ಮ ಹಾರೈಕೆ.
ಷಷ್ಠಿಪೂರ್ತಿ ಸಂಭ್ರಮದ ಈ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ಹಾರ್ದಿಕ ಅಭಿನಂದನೆಗಳು ಹಾಗೂ ಶುಭಾಶಯಗಳು. 🙏🌺
ಅಧ್ಯಕ್ಷರು
● ಇಚಿಲಂಪಾಡಿ ಹಾಲು ಉತ್ಪಾದಕರ ಸಂಘ
● ಜೀರ್ಣೋದ್ಧಾರ ಸಮಿತಿ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಕುರಿಯಾಳ ಕೊಪ್ಪ
● ಬ್ರಹ್ಮಕಲಶೋತ್ಸವ ಸಮಿತಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಒರುಂಬಾಲು
ಕಾರ್ಯದರ್ಶಿ
● ಶ್ರೀ ಅನಂತನಾಥ ಸ್ವಾಮಿ ಜೈನ ಬಸದಿ (ರಿ) ಇಚಿಲಂಪಾಡಿ
ಆಶಯ
ನಮ್ಮ ಮಾಗಣೆಯ ಎಲ್ಲಾ ಮನೆಯವರು ಒಟ್ಟು ಸೇರಿ ಒಂದು ಸುಂದರವಾದ ಶಿಲಾಮಯ ಬಸದಿಯನ್ನು ನಿರ್ಮಾಣ ಮಾಡಬೇಕೆಂಬುದು ಮಹದಾಸೆ.