ಜನರ ಅಭಿಪ್ರಾಯ – ದೇವರ ಅಭಿಪ್ರಾಯ – Peoples opinion – Gods opinion

ಶೇರ್ ಮಾಡಿ
ಜನಾಭಿಪ್ರಾಯಕ್ಕೆ ಸ್ಪಂದಿಸಿ ಸಂಘ ಸಮುಸ್ಥೆಗಳು, ದೇವಾಲಯಗಳ ಆಡಳಿತ ಸಮಿತಿಗಳು, ವಿಭಿನ್ನ ರೀತಿಯ ದೇವರ ಪೂಜೆಗಳಾದ – ವರಮಹಾಲಕ್ಷ್ಮಿ , ಗಣೇಶೋತ್ಸವ . ದಸರಾ …….., ಜೀರ್ಣೋದ್ಧಾರಗಳು , ಆಡಳಿತದ ಗ್ರಾಮ ಪಂಚಾಯತಿನಿಂದ ಹಿಡಿದು ಪಾರ್ಲಿಮೆಂಟಿನವರೆಗೆ , ರಾಜಕೀಯ ಪಕ್ಷಗಳು ಇತ್ಯಾದಿ ದೊಡ್ಡ ಪಟ್ಟಿ ಪ್ರಜಾಪ್ರಭುತ್ವ ಪದ್ದತಿಯ ಅಡಿಪಾಯದ ಮೇಲೆ ನಿಂತಿರುತದೆ. ಅಭಿಪ್ರಾಯಗಳು ಬಿನ್ನವಾದಾಗ ಏಲ್ಲಾ ಕ್ಷೇತ್ರಗಳಲ್ಲಿ ಒಡಕು ಸೃಷ್ಟಿಯಾಗಿ ಕಾರ್ಯಚಟುವಟಿಕೆ ಮೇಲೆ ಪರಿಣಾಮಭೀರಿ – ನಿಂತ ನೀರಾಗಿ – ಕಾಲಹರಣ ಸಮಯದ ಪೋಲು ಆರ್ಥಿಕ ಹಿನ್ನಡೆ – ಒಟ್ಟಾಗಿ ಹೇಳುವುದಾದರೆ ಭಿನ್ನತೆಯನ್ನು ಏಕಥೆಯಾಗಿ ಪರಿವರ್ತಿಸಿ ಮುನ್ನಡೆಸುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರಲ್ಲಿ ಇರಬೇಕಾದುದು ಅನಿವಾರ್ಯ.
ದೇವರ ಅಭಿಪ್ರಾಯದ ಅಂಕಿತ – ರಾಷ್ಟ್ರಪತಿಯ ಅಂಕಿತದಂತೆ – ನಮ್ಮಲ್ಲಿ ನಾವು ರೂಢಿಸಿಕೊಳ್ಳುವ ಪರಿಪಾಠ ಬೆಳೆದರೆ – ಅದು ಕಾಲಕ್ರಮೇಣ – ಸಮಾಜದ ಸುಖ ಶಾಂತಿ ನೆಮ್ಮದಿಗೆ ಬಿದ್ದ ಬೆಂಕಿ ಹತೋಟಿಗೆ ಬರಬಹುದು. ಇದು ನಾವು ನಮ್ಮ ಪೂರ್ವಜರು ಅಳವಡಿಸಿಕೊಂಡು ಬಂದಿದ್ದ – ವಿದೇಶಿ ಸಂಪ್ರದಾಯದಿಂದ ಮೂಲೆಗುಂಪಾದ – ನಮ್ಮೆಲ್ಲ ಸಮಸ್ಯಗಳಿಗೆ ಪರಿಹಾರ ಒದಗಿಸಬಲ್ಲ ಅತಿ ಉನ್ನತ ಮಾರ್ಗ. ದೇವರ ಅಭಿಪ್ರಯ ಕೇಳುವ ವಿಚಾರದಲ್ಲಿ ಪ್ರದೇಶವಾರು ಭಿನ್ನತೆಯಿದ್ದರೂ – ಅಂತಿಮವಾಗಿ ಭಿನ್ನತೆ ಏಕತೆಯಾಗಿ ಇಚ್ಚಿಸಿದ ಫಲ ಜನರ ಪಾಲಿಗೆ ಸಿಗುತದೆ.
ವ್ಯಕ್ತಿ ಯಾವುದೇ ಉನ್ನತ ಸ್ಥಾನದಲ್ಲಿದ್ದರು – ಜನಾಭಿಪ್ರಾಯ ನೂರಕ್ಕೆನೂರು ಏಕಾಭಿಪ್ರಾಯವಾಗಿದ್ದರು ಕೂಡ – ದೇವರ ಅಭಿಪ್ರಾಯಕ್ಕೆ ಮಾನ್ಯತೆ ಕೊಡದಿದ್ದಲ್ಲಿ ಸ್ವರ್ಗದ ಬದುಕಿನ ಬದಲು ನರಕದ ಬಾಳು ಜನರ ಪಾಲಿಗೆ ಕಟ್ಟಿಟ್ಟ ಬುತ್ತಿ. ಇಷ್ಟು ಮಾತ್ರವಲ್ಲದೆ ಮುಂದೆ ಆಗಬಹುದಾದ ದುರ್ಘಟನೆಗಳಿಗೆ ನಾವೇ ಕಾರ್ಯಕರ್ತರಾಗುತೇವೆ.
See also  Avyaktha Vachanagalu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?