ಜೈನ ಧರ್ಮೀಯರಿಗೆ ಪ್ರತ್ಯೇಕ ನಿಗಮ ರಚನೆ.. ಸಚಿವರ ಭರವಸೆ.

ಶೇರ್ ಮಾಡಿ

ಸನ್ಮಾನ್ಯ ಶ್ರೀ ಜಮೀರ್ ಅಹ್ಮದ್ ಖಾನ್ ಮಾನ್ಯ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಕರ್ನಾಟಕ ಸರ್ಕಾರ ಇವರನ್ನು ಇಂದು ಬೆಳಿಗ್ಗೆ ಮಂಗಳೂರಿನಲ್ಲಿ ಭೇಟಿ ಮಾಡಿ ಗೌರವಿಸಿ ಮನವಿ ಪತ್ರವನ್ನು ನೀಡಲಾಯಿತು ಜಿಲ್ಲಾಮಟ್ಟದಲ್ಲಿ ಸರ್ಕಾರದ ವತಿಯಿಂದ ಸಸ್ಯಹಾರಿ ವಿದ್ಯಾರ್ಥಿ ನಿಲಯ. ಜಿನ ಮಂದಿರಗಳ ಅಭಿವೃದ್ಧಿ ಬಗ್ಗೆ ವಿಶೇಷ ಅನುದಾನ ಪುರೋಹಿತರಿಗೆ ಗೌರವಧನ.. ಸಮುದಾಯ ಭವನಗಳ ನಿಯಮಗಳ. ಸರಳೀಕರಣ … ಬಸದಿಗಳ ಸಂಪರ್ಕ ರಸ್ತೆಗಳ ಡಾಮರೀಕರಣ ಮುಂತಾದ ಹಲವಾರು ಬೇಡಿಕೆಗಳನ್ನು ಸಚಿವರ ಮುಂದೆ ಮಂಡಿಸಲಾಯಿತು.. ಅತಿ ಶೀಘ್ರದಲ್ಲಿ ಜೈನ ಸಮುದಾಯದ ಅಭಿವೃದ್ಧಿ ನಿಗಮವನ್ನು ರಚನೆ ಮಾಡುವುದಾಗಿ ತಿಳಿಸಿದರು ಮಾತ್ರವಲ್ಲದೆ ಸಮುದಾಯದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.. ಶ್ರೀ ಹರೀಶ್ ಕುಮಾರ್ ಶಾಸಕರು ವಿಧಾನ ಪರಿಷತ್ ಕರ್ನಾಟಕ ಸರಕಾರ…ಡಾ. ಕೆ. ಜಯಕೀರ್ತಿ ಜೈನ್.ಧರ್ಮಸ್ಥಳ .ಸುದರ್ಶನ್ ಜೈನ್ ಬಂಟ್ವಾಳ ಶಶಿಕಿರಣ್ ಜೈನ್ ಬೆಳ್ತಂಗಡಿ.. ಶುಭಾಕರ ಹೆಗ್ಗಡೆ ಇಚಿಲಂಪಾಡಿ ಬೀಡು ಮಹಾವೀರ್ ಜೈನ್ ದೆಪ್ಪುನಿ . ಫಣಿರಾಜ ಜೈನ್ ಕೊಕ್ಕಡ… ಜಿನರಾಜ. ಪೂವಣಿ ಉಜಿರೆ.. ಭರತ್ ಜೈನ್ ಉಜಿರೆ.. ರತ್ನರಾಜ ಜೈನ್. ಪೇರಂದಬೈಲ್… ಧರಣೇಂದ್ರ ಇಂದ್ರ ಸುದೇಶ ಕುಮಾರ್ ಮುಂತಾದವರು ಉಪಸ್ಥಿತರಿದ್ದರು,

See also  Ajithprasad, Kalkuda mada, kaniyuruguttu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?