ಇಚ್ಲಂಪಾಡಿ: ನೇರ್ಲ ಸಂಕೀರ್ಣದ ಬಳಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮ ದಿನದ ಪ್ರಯುಕ್ತ ಅಪ್ಪು ಮೆಲೋಡಿಸ್ ಅರ್ಪಿಸುವ ರಸಮಂಜರಿ , ಡ್ಯಾನ್ಸ್ ಇನ್ಸಿಟ್ಯೂಟ್ ಅವಾರ್ಡ್ ಪುರಸ್ಕೃತ ಜೇಸಿ ಕುಶಾಲಪ್ಪ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇವರಿಂದ ನಾಟ್ಯ ವೈಭವ

Share this

ದಿನಾಂಕ 17-3-2023ನೇ ಶುಕ್ರವಾರ ರಾತ್ರಿ 7.30 ಗಂಟೆಯಿಂದ ಇಚ್ಲಂಪಾಡಿಯ ನೇರ್ಲ ಸಂಕೀರ್ಣದ ಬಳಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮ ದಿನದ ಪ್ರಯುಕ್ತ ಅಪ್ಪು ಮೆಲೋಡಿಸ್ ಇಚ್ಲಂಪಾಡಿ ಅರ್ಪಿಸುವ ರಸಮಂಜರಿ ಕಾರ್ಯಕ್ರಮ ನಡೆಯಲಿದೆ..  ಗಾಯಕರಾದ ಗಣೇಶ್ ಮಂಗಳೂರು, ಶ್ರೀ ವಿದ್ಯಾ ಮಂಗಳೂರು, ಸಫ್ವಾನ್ ಸಾಲೆತ್ತೂರು, ಜ್ಯೋತಿ ಮಂಗಳೂರು,ಸಂತೋಷ್ ಶೆಟ್ಟಿ ಇರಾ ಇವರಿಂದ ಗೀತ ಗಾಯನ  ಹಾಗೂ ಬೆಸ್ಟ್ ಡ್ಯಾನ್ಸ್ ಇನ್ಸಿಟ್ಯೂಟ್ ಅವಾರ್ಡ್ ಪುರಸ್ಕೃತ ಜೇಸಿ ಕುಶಾಲಪ್ಪ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇವರಿಂದ ನಾಟ್ಯ ವೈಭವ ನಡೆಯಲಿದೆ. ಸ್ಥಳ ದಾನ ನೀಡಿ ಸಹಕಾರ ನೀಡಲಿರುವ ವಿಶ್ವನಾಥ ಗೌಡ ಹಾಗೂ ಮಕ್ಕಳು ನೇರ್ಲ, ಇಚ್ಲಂಪಾಡಿ, ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿಕೊಡುವ   ಸತೀಶ್ ಪೂಜಾರಿ ಇಚ್ಲಂಪಾಡಿ, ಕಾರ್ಯಕ್ರಮ ಕ್ಕೆ ಧ್ವನಿ ಮತ್ತು ಬೆಳಕು ವಿಜಿತ್ ಇವೆಂಟ್ಸ್ ಮರ್ಧಾಳ ಎಂದು ಅಪ್ಪು ಮೆಲೋಡಿಸ್ ಆಡಳಿತ ಸಮಿತಿ ತಿಳಿಸಿದೆ.

See also  ಸೇವಾ ಒಕ್ಕೂಟದ ಶುಲ್ಕದ ವಿವರ - Details of Service federation fees

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you