Avyaktha Vachanagalu – ಅವ್ಯಕ್ತ ವಚನಗಳು

Share this

ದೇಹದ ರೋಗ ದೇಹಕ್ಕೆ ಆಪತ್ತು
ಆತ್ಮದ ರೋಗ ಸಮಾಜಕ್ಕೆ ಆಪತ್ತು
ಆತ್ಮ ರೋಗಕ್ಕೆ ವೈದ್ಯರು ಬೇಕಯ್ಯಾ ————————————— ಅವ್ಯಕ್ತ

ಆತ್ಮದ ರೋಗಕ್ಕೆ ಕಾನೂನು ಪಾಲನೆ ಮದ್ದು
ಆತ್ಮದ ರೋಗಕ್ಕೆ ಧರ್ಮ ಪಾಲನೆ ಮದ್ದು
ಕಾನೂನು ಧರ್ಮ ಪಾಲಿಸದಿರೆ ರೋಗ ಗಗನಕ್ಕೆಂದ ————————————– ಅವ್ಯಕ್ತ

ದೇಹದ ರೋಗ ದೇಹ ಸುಡುತಿರೆ
ಆತ್ಮದ ರೋಗ ಸಮಾಜ ಸುಡುತಿರೆ
ಆತ್ಮದ ರೋಗ ಅರಿತು ಬಾಳೆಂದ —————————————————— ಅವ್ಯಕ್ತ

ರುಚಿಗೆ ತಿಂದವ ರೋಗಿ
ಹಸಿವಿಗೆ ತಿಂದವ ನಿರೋಗಿ
ಹಸಿವಿಗೆ ತಿಂದು ಬಾಳೆಂದ ————————————– ಅವ್ಯಕ್ತ

ಸ್ವದೇಶಿ ವಿದ್ಯೆ ತ್ಯಾಗಿಗಳಿಗೆ ನಾಂದಿ
ವಿದೇಶಿ ವಿದ್ಯೆ ಸ್ವಾರ್ಥಿಗಳಿಗೆ ನಾಂದಿ
ವಿದ್ಯೆಯ ಮಹತ್ವ ಅರಿತರೆ ಒಳಿತೆಂದ ———————————————– ಅವ್ಯಕ್ತ

ಮಾನವ ಸ್ವಾರ್ಥಕ್ಕೆ ಪಕ್ಷ ಬಲಿ
ಮಾನವ ಸ್ವಾರ್ಥಕ್ಕೆ ದೇಶ ಬಲಿ
ಸ್ವಾರ್ಥ ಇತಿಶ್ರೀಗೆ ದೇವಾ ಧರೆಗಿಳಿಯೆಂದ ——————————————- ಅವ್ಯಕ್ತ

ದೇವಾಲಯ ವಿದ್ಯಾಲಯ ನ್ಯಾಯಾಲಯ ಕಲ್ಪವೃಕ್ಷ ಆಗಿಹುದು
ಮರ್ಮವ ತಿಳಿಹೇಳುವವರ ಕೊರತೆ ನಿರಂತರ ಕಾಡುತಿಹುದು
ಮುಕ್ತೇಶ್ವರರು ಆಡಳಿತಗಾರರು ತಂತ್ರಿಗಳು ಪೂಜಾರಿಗಳು ಬೋದಿಪರೆ —————————————- ಅವ್ಯಕ್ತ

ದೈವ ದೇವರ ಪ್ರತಿಷ್ಠೆ ಮನದಿ ಮಾಡಿದಾತ
ಜಗದ ಜೀವರಾಶಿಗಳಲ್ಲಿ ದೈವ ದೇವರ ಖಾಂಬ
ಭಿನ್ನ ಪ್ರತಿಷ್ಠೆಗಳ ಅರಿತ ಬದುಕು ಲೇಸೆಂದ ———————————————- ಅವ್ಯಕ್ತ

ಬಾಹ್ಯ ಪೂಜೆಗಿಂತ ಆಂತರಿಕ ಪೂಜೆ ಲೇಸು
ವಯಕ್ತಿಕ ಪೂಜೆಗಿಂತ ಸಾಮೂಹಿಕ ಪೂಜೆ ಲೇಸು
ಪೂಜೆಯ ಮರ್ಮ ಅರಿತು ಪೂಜೆ ಮಾಡೆಂದ ————————————————– ಅವ್ಯಕ್ತ

ಬದುಕಿಗೆ ದಾರಿ ತೋರಿಸುವವರು ದೈವ ದೇವರುಗಳು
ತೋರಿಸಿದ ದಾರಿ ಮರೆತು ಪೂಜೆಯಲ್ಲಿ ಮಗ್ನರಾಗಿಹರು
ಬದುಕಿನ ದಾರಿ ಮರೆತರೆ ನೆಮ್ಮದಿ ಕನಸೆಂದ ————————————— ಅವ್ಯಕ್ತ

ತನ್ನ ಬದುಕಿನ ಕನ್ನಡಿ ನೋಡದಾತ
ಅನ್ಯರ ಬದುಕಿನ ಕನ್ನಡಿ ನೋಡುವಾತ
ಆತ್ಮಹತ್ಯೆ ದಾರಿಯತ್ತ ದಾಪುಗಾಲು ಹಾಕುತಿಹನು ————————————————– ಅವ್ಯಕ್ತ

ಜನ ಬಲ ಇದ್ದರೆ ದೇವಾಲಯ
ಹಣ ಬಲವಿದ್ದರೆ ದೇವ ಲಯ
ದೇವರು ಮಾನವರಿಗೆ ಕಳಿಸಿದ ಪಾಠ ——————————————– ಅವ್ಯಕ್ತ

ಮಾನವನಿಂದ ನ್ಯಾಯದಾನ ತಪ್ಪುಒಪ್ಪುಗಳ ಮಿಶ್ರಣ
ದೈವದೇವರ ನ್ಯಾಯದಾನ ತಪ್ಪುರಹಿತ ಕೊಡುಗೆ
ದೈವದೇವರ ನ್ಯಾಯದಾನ ಪರಿ ತಿಳಿಯೆಂದ —————————————————- ಅವ್ಯಕ್ತ

ತನ್ನ ತಪ್ಪನ್ನು ತಿದ್ದಿಕೊಳ್ಳುವಾತ
ಅನ್ಯರ ತಪ್ಪನ್ನು ನೋಡದಾತ
ದೇವರ ಜೊತೆ ಸಾಗುತಿಹನು ————————————————– ಅವ್ಯಕ್ತ

ಬಾಹ್ಯ ಕಟ್ಟುಪಾಡು ಪಾಲನೆ ಇಂದಿನ ಬದುಕು
ಆಂತರಿಕ ಕಟ್ಟುಪಾಡು ಪಾಲನೆ ಅಂದಿನ ಬದುಕು
ಆಂತರಿಕ ಕಟ್ಟುಪಾಡಿನ ಮರ್ಮ ತಿಳಿದು ಬಾಳೆಂದ ———————– ಅವ್ಯಕ್ತ

ದೇವಾಲಯಕ್ಕೆ ದಿನಾಲೂ ಹೋಗುತಿರೆ ದಿನಾಲೂ ದೇವರು ಜೊತೆಗಿಹರು
ದೇವಾಲಯಕ್ಕೆ ವಾರಕ್ಕೊಮ್ಮೆ ಹೋಗುತಿರೆ ವಾರಕ್ಕೊಮ್ಮೆ ದೇವರು ಜೊತೆಗಿಹರು
ದೇವಾಲಯಕ್ಕೆ ಇಷ್ಟವಾದಾಗ ಹೋಗುತಿರೆ ಇಷ್ಟವಾದಾಗ ದೇವರು ಜೊತೆಗಿಹರು ————————– ಅವ್ಯಕ್ತ

ದೇವರಿಗೆ ಕೊಡುವಾಗ ಸಾಕೆಂಬರು,
ದೇವರು ಕೊಡುವಾಗ ಬೇಕೆಂಬರು,
ದೇವರ ಅರಿತಿಲ್ಲ ಮಾನವರು———————– ———————————–ಅವ್ಯಕ್ತ

See also  Avyaktha Vachanagalu

ದೇವರಿಗಾಗಿ ಜಗದಿ ಸುತ್ತುತಿಹರು,
ದೇವರಿಗಾಗಿ ಮನದಿ ಸುತ್ತದಿರೆ,
ದೇವರಿಂದ ದೂರ ಇರುತಿಹೆನು..———————————- ———————ಅವ್ಯಕ್ತ

ಕೊಳಕು ನೀರಿನಲ್ಲಿ ಶುದ್ಧತೆ ಅಡಗಿದೆ
ಕೆಟ್ಟ ಮಾನವರಲ್ಲಿ ಒಳ್ಳೆತನ ಅಡಗಿದೆ
ಕಾಲದ ಉರುಳಿನಲ್ಲಿ ಬದುಕು ತಿಳಿಯೆಂದ ——————————————— ಅವ್ಯಕ್ತ

ಉದ್ಯೋಗಕ್ಕಾಗಿ ಅಲೆದಾಟ ಇಂದಿನ ವಿದ್ಯೆ
ಮನೆಯಲ್ಲಿಯೇ ಉದ್ಯೋಗ ಅಂದಿನ ವಿದ್ಯೆ
ಉದ್ಯೋಗಕ್ಕಾಗಿ ಅಲೆದಾಟಕ್ಕೆ ಇತಿಶ್ರೀ ಹಾಡೆಂದ ——————————————— ಅವ್ಯಕ್ತ

ಮಾಧ್ಯಮಗಳು ಗುರಿ ಮುಟ್ಟಿದವರ ಹಿಂದೆ ಬಿದ್ದಿರೆ
ಆವಿಸ್ಕಾರಿಗಳ ಹುಡುಕಿ ಗುರಿ ಮುಟ್ಟಲು ಸಹಕರಿಸದಿರೆ
ಪ್ರಸಾರ ಮಾಧ್ಯಮಗಳು ಪ್ರಚಾರ ಮಾಧ್ಯಮ ಆಗಿಹುದು —————————- ಅವ್ಯಕ್ತ

ಅಭಿಯಾನ ಮಾನವ ಕುಲಕೋಟಿಯ ಕಲ್ಪವೃಕ್ಷ
ಸಹಾಯ ಸಂಪಾದನೆ ಅಭಿಯಾನದಿಂದ ಸಾಧ್ಯ
ಅಭಿಯಾನದಲ್ಲಿ ತೊಡಗಿ ನೆಮ್ಮದಿಯಿಂದ ಬಾಳೆಂದ ————————————————— ಅವ್ಯಕ್ತ

ಆಂತರಿಕ ಪ್ರಪಂಚದಲ್ಲಿ ಬೆರೆಯುವುದು ಯಾತ್ರೆ
ಬಾಹ್ಯ ಪ್ರಪಂಚದಲ್ಲಿ ಬೆರೆಯುವುದು ಪ್ರವಾಸ
ಯಾತ್ರೆ ಪ್ರವಾಸ ಅರಿಯುವುದು ಲೇಸೆಂದ ————————————————- ಅವ್ಯಕ್ತ

ನಿತ್ಯ ದೇವಾಲಯಕ್ಕೆ ಹೋಗುವವರು ಅಗರ್ಭ ಶ್ರೀಮಂತರು
ವಾರಕ್ಕೊಮ್ಮೆ ದೇವಾಲಯಕ್ಕೆ ಹೋಗುವವರು ಸಾಮಾನ್ಯ ಶ್ರೀಮಂತರು
ಇಷ್ಟಬಂದಾಗ ದೇವಾಲಯಕ್ಕೆ ಹೋಗುವವರು ಕಡು ಬಡವರೆಂದ ———————————————- ಅವ್ಯಕ್ತ

ಅಪರಿಮಿತ ಅಸ್ತಿ ಪುಕ್ಕಟೆ ಸಿಗುತಿಹುದು
ಕೃಷಿ ಮಾಡಲು ಮುಂದೆ ಬಾರದಿರಲು
ಲೋಕ ಜ್ಞಾನದ ಕೊರತೆ ಕಾಡುತಿದೆ —————————————– ಅವ್ಯಕ್ತ

ಭೂಮಿಯಲ್ಲಿ ಕೃಷಿ ಮಾಡುವಾತ ಕಡುಬಡವ
ಕಾಗದದಲ್ಲಿ ಕೃಷಿ ಮಾಡುವಾತ ಬಡವ
ಆನ್ಲೈನ್ ಕೃಷಿ ಮಾಡುವಾತ ದಣಿಕನೆಂದ ————————————————- ಅವ್ಯಕ್ತ

ದೇವರ ಅರಿವು ಇದ್ದೊಡೆ ದೇವಾಲಯದ ಉಳಿವು
ದೇವರ ಅರಿವು ಇಲ್ಲದಿದ್ದೊಡೆ ದೇವಾಲಯದ ಅಳಿವು
ದೇವರ ಅರಿವು ಹುಟ್ಟಿಸುವ ವ್ಯವಸ್ಥೆ ಮಾಡೆಂದ —————————————————- ಅವ್ಯಕ್ತ

ಮಾನವರಲ್ಲಿ ಒಡಹುಟ್ಟಿದವರಲ್ಲಿ ದೇವರ ಕಾಣುವಾತ
ಮಾನವರ ಪ್ರಕೃತಿಯ ಸಂರಕ್ಷಣೆ ಮಲ್ಪಾತ
ಪಟ್ಟದ ಅರಮನೆಯಲ್ಲಿ ಕುಳಿತ ಕುಬೇರನೆಂದ ————————————— ಅವ್ಯಕ್ತ

ಹುಟ್ಟು ಜೈನರು ಜಗಳವಾಡುತಿಹರು
ಆಚರಣೆ ಜೈನರು ಒಗ್ಗಟಾಗಿಹರು
ಆಚರಣೆ ಜೈನರಾದರೆ ಒಳಿತೆಂದ —————————————– ಅವ್ಯಕ್ತ

ಸೇವಾ ಸಂಪಾದನೆ ಅರಸು ಪದ್ಧತಿ
ವ್ಯಾಪಾರ ಸಂಪಾದನೆ ಪ್ರಜಾ ಪದ್ಧತಿ
ದರೋಡೆ ಸಂಪಾದನೆ ಸ್ವಾರ್ಥ ಪದ್ದತಿಯೆಂದ ————————————– ಅವ್ಯಕ್ತ

ನ್ಯಾಯಾಲಯದ ನ್ಯಾಯದಾನ ವ್ಯಕ್ತಿ ತೀರ್ಪು
ದೇವಾಲಯದ ನ್ಯಾಯದಾನ ದೇವರ ತೀರ್ಪು
ನ್ಯಾಯಾಲಯದ ದೇವಾಲಯದ ತೀರ್ಪು ಅರಿಸೆಂದ ——————————- ಅವ್ಯಕ್ತ

ದೇವರಲ್ಲಿಗೆ ಹೋಗಲು ದೇವಾಲಯ ವಾಹನ
ವಾಹನ ದುರಸ್ತಿ ಬಣ್ಣ ಹಚ್ಚುತಿಹರು
ದೇವಾ ನಾ ಕೊಚ್ಚೆಯಲ್ಲಿ ಬಿದ್ದಿಹೆನು ——————————————— ಅವ್ಯಕ್ತ

ದೈವ ಬಲದೊಂದಿಗೆ ಜನಬಲ ಪೂರಕ
ದೈವ ಬಲವಿಲ್ಲದ ಜನಬಲ ಮಾರಕ
ದೈವ ಬಲದ ಮಹತ್ವ ತಿಳಿಯೆಂದ ————————————————— ಅವ್ಯಕ್ತ

ಜನ ಬಲದ ಮಾತಿಗೆ ಪ್ರಧಾನಿ ಬದ್ದ
ದೈವ ಬಲದ ಮಾತಿಗೆ ಅರಸು ಬದ್ದ
ಜನ ಬಲದ ಮಾತಿಗೆ ಅರಸ ಬದ್ಧನಾಗುವನೆ ———————————— ಅವ್ಯಕ್ತ

ತಪ್ಪಿನ ಸಮರ್ಥನೆ ವಾದಕ್ಕೆ ಮೂಲ
ತಪ್ಪಿನ ಒಪ್ಪಿಗೆ ಏಕತೆಗೆ ಮೂಲ
ವಾದ ವಿವಾದ ಅರಿವಿನ ಕೊರತೆಯೆಂದ ——————————————— ಅವ್ಯಕ್ತ

See also  Avyaktha Vachanagalu

ಅಕಾಲಿಕ ಮರಣಕ್ಕೆ ಸ್ಪಂದಿಸುವ ಇಷ್ಟಮಿತ್ರರು
ಅಕಾಲಿಕ ರೋಗಕ್ಕೆ ಸ್ಪಂದಿಸುವ ಇಷ್ಟಮಿತ್ರರು
ಆರ್ತಿಕ ಸಂಕಷ್ಟಕ್ಕೆ ಸ್ಪಂದಿಸುತಿಲ್ಲ ಏಕಯ್ಯ ——————————- ಅವ್ಯಕ್ತ

ಬದುಕಿನ ಶಿಕ್ಷಣ ಜಾತಿ
ಉದ್ಯೋಗ ಶಿಕ್ಷಣ ವಿದ್ಯೆ
ನಾವು ಅರಿತು ಬಾಳೋಣ ——————————————————– ಅವ್ಯಕ್ತ

ಅರಸನಿಗೆ ಸಲಹೆಗಾರರು ದೈವ ದೇವರು
ಪ್ರಧಾನಿಗೆ ಸಲಹೆಗಾರರು ನ್ಯಾಯಾಂಗ ರಾಷ್ಟ್ರಪತಿ
ಅರಸ ಪ್ರಧಾನಿ ಸಲಹೆಗೆ ಸ್ಪಂದಿಸುತಿಹರೆ ———————————— ಅವ್ಯಕ್ತ

ಪ್ರಜಾ ಪದ್ಧತಿ ಜನ ಬೆಂಬಲ ಪ್ರತೀಕ
ಅರಸು ಪದ್ಧತಿ ದೈವದೇವರ ಬೆಂಬಲ ಪ್ರತೀಕ
ಅಳಿವು ಸೋಲು ಅರಸು ಪದ್ದತಿಗೆ ಇಲ್ಲವೆಂದ ————————- ಅವ್ಯಕ್ತ

ಜನ ಬೆಂಬಲ ಕಳೆದುಕೊಂಡ ಪ್ರಧಾನಿ ಮನೆಗೆ
ದೈವದೇವರ ಬೆಂಬಲ ಕಳೆದುಕೊಂಡ ಅರಸ ಸ್ಮಶಾನಕ್ಕೆ
ಪ್ರಧಾನಿ ಅರಸರಲ್ಲಿ ಯಾರ ಆಡಳಿತ ಒಳಿತಯ್ಯ ———————– ಅವ್ಯಕ್ತ

ಪ್ರಜಾ ಪದ್ದತಿಯಲ್ಲಿ ನ್ಯಾಯ ಅನ್ಯಾಯ ತೀರ್ಮಾನ ಬಲುಕಷ್ಟ
ಅರಸು ಪದ್ದತಿಯಲ್ಲಿ ಕೇವಲ ಬೆರಳೆಣಿಕೆ ನಿಮಿಷ ಮಾತ್ರ
ಅಂದಿನ ವಿದ್ಯೆರಹಿತ ಬುದ್ದಿಜೀವಿಗಳ ಬದುಕು ಲೇಸೆಂದ —————- ಅವ್ಯಕ್ತ

ಸ್ವಜಾತಿ ಭಯೋತ್ಪದಕರ ಸಂಖ್ಯೆ ಏರು ಗತಿಯಲ್ಲಿಹುದಯ್ಯ
ದೇವರ ಪೂಜೆ ಜಪತಪ ಬೋಧನೆ ಸಾಲದಯ್ಯ
ಸ್ವಜಾತಿ ನಿಗ್ರಹ ದಳ ರಚನೆ ಅನಿವಾರ್ಯವೆಂದ ————- ಅವ್ಯಕ್ತ

ಸಮಾನತೆ ಬೋದಿಪ ವಿದ್ಯಾ ಸಮುಸ್ತೆಗಳು
ಅಸಮಾನತೆ ಸೃಷ್ಟಿಸುವ ದೈವ ದೇವಸ್ಥಾನಗಳ
ದೇವಾ ಪರಾಕಾಯದೊಳು ಬಂದು ರಕ್ಷಿಸೆಂದ —————————————————- ಅವ್ಯಕ್ತ

ಜಾತಿ ಪಾಠ ಓದಿ ಅಳವಡಿಸದಿದ್ದೊಡೆ
ನನ್ನ ಜಾತಿಯ ಹೆಸರು ಪೇಳುತಿರೆ
ಮಾನವ ಕುಲಕ್ಕೆ ಜಾತಿಗೆ ಅವಮಾನವೆಂದ ——————————————————– ಅವ್ಯಕ್ತ

 

ಅನ್ಯರ ಕಿಸೆ ತುಂಬುವ ವಾಟ್ಸಪ್ಪ್ ಫೇಸ್ಬುಕ್ ಬಳಕೆದಾರರೆ
ನಿನ್ನ ಕಿಸೆ ಬರಿದುಮಾಳ್ಫ ವಾಟ್ಸಪ್ಪ್ ಫೇಸ್ಬುಕ್ ಬಳಕೆದಾರರೆ
ನಿನ್ನ ಕಿಸೆ ವಾಟ್ಸಪ್ಪ್ ಫೇಸ್ಬುಕ್ ತುಂಬಿಸಲು ತಿಳಿಯೆಂದ ……………………………ಅವ್ಯಕ್ತ

ಉದ್ಯೋಗ ಉದ್ಯಮಕ್ಕೆ ಬುಲೆಟಿನ್ ಉದಯ
ಅರಿತು ಉದ್ಯೋಗ ಉದ್ಯಮಕ್ಕೆ ತೊಡಗಿದರೆ
ಬದುಕು ನಿತ್ಯ ಸುಖದ ಸುಪ್ಪತ್ತಿಗೆಯೆಂದ ………………………………………………ಅವ್ಯಕ್ತ

ಗ್ರಾಮ ಹರಟೆ ವಾಟ್ಸಪ್ಪ್
ತಾಲೂಕು ಹರಟೆ ಫೇಸ್ಬುಕ್
ಜಗದಿ ಹರಟೆ ವೆಬ್ಬೆಂದ …………………………………………………………………ಅವ್ಯಕ್ತ

ದೇಹದ ರೋಗಕ್ಕೆ ವೈದ್ಯರು ಇರುವವರಯ್ಯ
ಆತ್ಮನ ರೋಗಕ್ಕೆ ದೇವರು ಇರುವವರಯ್ಯ
ಅರಿತು ಬಾಳಿದವನಿಗೆ ನೆಮ್ಮದಿ ಬಾಳೆಂದ —————————————– ಅವ್ಯಕ್ತ

 

ಭೂತ ಲೋಕದ ತಪ್ಪು ತಿದ್ದುತಿಹುದು ಅಂದು
ಭೂತ ವ್ಯಕ್ತಿ ತಪ್ಪು ತಿದ್ದುತಿಹುದು ಇಂದು
ಭೂತದ ಮೂಲ ಸ್ವರೂಪ ಜನರ ಅಂಬೋಣ ——————– ಅವ್ಯಕ್ತ

ಧನದ ಮೂಲಕ ತೋರ್ಪಡಿಸುವ ಭಕ್ತಿ ಶ್ರದ್ದೆ ಇಂದು
ಮನದ ಮೂಲಕ ತೋರ್ಪಡಿಸುವ ಭಕ್ತಿ ಶ್ರದ್ದೆ ಅಂದು
ಭಕ್ತಿ ಶ್ರದ್ದೆಯ ಮರ್ಮ ಮನ ಮುಟ್ಟುವಂತೆ ಪೆಳೆಂದ ————– ಅವ್ಯಕ್ತ

 

ಸೇವೆ ಮಾಯವಾಗಿ ವ್ಯಾಪಾರ
ವ್ಯಾಪಾರ ಮಾಯವಾಗಿ ದರೋಡೆ
ಸೇವಾ ಬದುಕು ಬೇಕೆಂದ ——————————————- ಅವ್ಯಕ್ತ

ಅರಿಯದೆ ಮಾತನಾಡುವವರ ಜಗದಿ
ಅರಿತು ಮಾತನಾಡುವವರು ಇದ್ದೊಡೆ
ಮೂಖನಾಗಿ ದೇವರರಂತೆ ಬದುಕೆಂದ —————————- ಅವ್ಯಕ್ತ

See also  Avyaktha Vachanagalu

ಪಟ್ಟದ ಅರಸು ಇದ್ದ ಸಭೆ ರಣರಂಗವಾದೊಡೆ
ಅರಸನ ಮಾತಿಗೆ ಬೆಲೆ ತೆತ್ತು ಪಾಲಿಸದಿದ್ದೊಡೆ
ದೈವ ದೇವರ ಮಾಯಾ ಶಕ್ತಿ ಧರೆಗಿಳಿಯುವುದೆಂದ ————— ಅವ್ಯಕ್ತ

ದೇವರಲ್ಲಿ ಭಿಕ್ಷೆಗಾಗಿ ದೇವಾಲಯಕ್ಕೆ ಬರುತಿಹರು
ದೇವಾಲಯಕ್ಕೆ ಬಂದು ಅಧಿಕಾರ ಚಲಾಯಿಸಿದರೆ
ದೇವರು ಕೊಡುವ ಭಿಕ್ಷೆ ವಿಷವಾದೀತು —————————— ಅವ್ಯಕ್ತ

ದೈವ ದೇವರ ಸೇವಾ ಒಕ್ಕೂಟಗಳ ಉದಯ
ವೃತ್ತಿ ವ್ಯಾಪಾರ ಸೇವಾ ಒಕ್ಕೂಟಗಳ ಉದಯ
ರಾಜಕಾರಿಣಿಗಳ ಸೇವಾ ಒಕ್ಕೂಟಗಳ ಕೃಪೆಯೆಂದ ——————- ಅವ್ಯಕ್ತ

ಸೇವಾ ಒಕ್ಕೂಟಗಳ ವ್ಯಾಪ್ತಿ ವಿಸ್ತರಿಸಿದೊಡೆ
ನರಕ ಮಾನವ ಬಾಳು ಮಾಯವಾಗಿ
ಸುಖ ಶಾಂತಿ ನೆಮ್ಮದಿ ಲಭಿಸುವುದೆಂದ ——————————– ಅವ್ಯಕ್ತ

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you