Avyaktha Vachanagalu

Share this

ದೈವದ ನುಡಿಕಟ್ಟಿನ ನ್ಯಾಯದಾನ ಅಂದು 
ದೈವದ ಪಂಚಾತಿಕೆ ನ್ಯಾಯದಾನ ಇಂದು 
ದೈವದ ಪುಷ್ಪದ ನುಡಿ ನ್ಯಾಯದಾನ ಬೇಕೆಂದ ———————————– ಅವ್ಯಕ್ತ

ದೈವಾರಾಧನೆ ಮೂಲ ಮಾನವ ಸಂಕಷ್ಟ ನಿವಾರಣೆ
ದೈವಾರಾಧನೆ ಮಾನವ ಸಂಕಷ್ಟಗಳಿಗೆ ಮೂಲ ಇಂದು
ದೈವಾರಾಧನೆ ಮೂಲ ಭಾವಣೆಯಲ್ಲಿ ಅರಿತು ಬಾಳೆಂದ ———————— ಅವ್ಯಕ್ತ

ಭಾವ ಪೂಜೆ ದೇವರಿಗೆ ಮಾಡುತಿರೆ
ಬಾಹ್ಯ ಶುದ್ಧತೆ ಪೂಜೆ ಜೊತಿಗಿರೆ
ದೈವ ದೇವರು ಸದಾ ಜೊತೆಗಿಹರು ————————————————— ಅವ್ಯಕ್ತ

ದೇಹ ದೇಗುಲ ಮನೆ ದೇಗುಲ ಕುಟುಂಬ ದೇಗುಲ
ವಿದ್ಯಾ ದೇಗುಲ ನ್ಯಾಯ ದೇಗುಲ ಅಗಣಿತ ದೇಗುಲ
ದೇವರ ಹುಡುಕಾಟದಿ ಮಾನವ ಸೋತು ಅಂಗಲಾಚಿ ಬಿದ್ದಿಹನು —————- ಅವ್ಯಕ್ತ

ದೇವರು ಮಾನವನಿಗೆ ಕೊಟ್ಟ ದೇವಾಲಯ ದೇಹ
ಮಾನವ ದೇವರಿಗಾಗಿ ನಿರ್ಮಾಣ ವ್ಯವಸ್ಥೆ ದೇವಾಲಯ
ದೇಹ ದೇವಾಲಯದ ಮರ್ಮವ ಅರಿತು ಬಾಳೆಂದ —————————————————– ಅವ್ಯಕ್ತ

ಹಣ ಸಂಪಾದನೆ ಪುಣ್ಯ ಸಂಪಾದನೆ ವಿದ್ಯೆ ಇಲ್ಲದಿರೆ
ಹಣ ಸಂಪಾದನೆ ಪುಣ್ಯ ಸಂಪಾದನೆ ದೇಗುಲ ಇರುತಿರೆ
ವಿದ್ಯಾ ದೇಗುಲ ಬರಿದಾಗಿ ದೇವ ದೇಗುಲ ತುಂಬುತಿಹುದು —————————————- ಅವ್ಯಕ್ತ


ಮಾನವ ಸ್ವಾರ್ಥ ಮುಗಿಲು ಮುಟ್ಟಿದೆ
ಮಾನವರ ತ್ಯಾಗ ಪಾತಾಳಕ್ಕೆ ಇಳಿದಿದೆ
ಮಾನವರಲ್ಲಿ ಸ್ವಾರ್ಥ ತ್ಯಾಗ ಬೇಕೆಂದ ———————————————————- ಅವ್ಯಕ್ತ

ಮಠಾಧಿಪತಿಗಳ ದುರ್ಬಳಕೆ ಮಾಡುತಿಹರು ಸ್ವಾರ್ಥಿಗಳು
ಮಠಾಧಿಪತಿಗಳ ಸದ್ಬಳಕೆ ಮಾಡುತಿಹರು ತ್ಯಾಗಿಗಳು
ಮಠಕ್ಕೊಂದು ತ್ಯಾಗಿಗಳ ಸೇವಾಒಕ್ಕೂಟ ಬೇಕೆಂದ ——————————————— ಅವ್ಯಕ್ತ

See also  Avyaktha Vachanagalu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you