ಅಭಿಯಾನ ಬಗ್ಗೆ

ಶೇರ್ ಮಾಡಿ

ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ’ ಎಂಬ ವಾಕ್ಯ ಗಾಢ ನಿದ್ರೆಯಲ್ಲಿದ್ದರನ್ನೂ ಬಡಿದೆಬ್ಬಿಸಬಲ್ಲದು. ಗುರಿಯೆಡೆಗೆ ಮುನ್ನಡೆಸಬಲ್ಲದು. ಸ್ವಾಮಿ ವಿವೇಕಾನಂದರ ಇಂತಹ ಧೀರವಾಣಿಗಳೇ ಸ್ವಾತಂತ್ರ್ಯದ ಕೆಚ್ಚನ್ನು ಹಚ್ಚಿ ಹೋರಾಟದ ಕಾವನ್ನು ಹೆಚ್ಚಿಸಿದವು. ಅದರ ಪರಿಣಾಮವಾಗಿ, ಸಾವಿರಾರು ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ದಟ್ಟ ದರಿದ್ರ ಸ್ಥಿತಿಯಲ್ಲಿದ್ದ ಸಮಾಜಬಂಧುಗಳು ಒಂದೆಡೆಯಾದರೆ, ಸಿರಿವಂತಿಕೆಯಲ್ಲಿ ಮೆರೆಯುತ್ತಿದ್ದವರು ಇನ್ನೊಂದೆಡೆ. ಆಗಲೂ ಅಂತಹ ಸ್ಥಿತಿ ಸಮಾಜದಲ್ಲಿತ್ತು. ಇದನ್ನು ಸ್ಪಷ್ಟವಾಗಿ ಖಂಡಿಸಿ, ‘ದರಿದ್ರದೇವೋ ಭವ’ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ ಸಂತ ಸ್ವಾಮಿ ವಿವೇಕಾನಂದರು. ಸಮಾಜ ಸೇವೆಯಲ್ಲಿ ನಿರತವಾಗಿರುವ ಸಾವಿರಾರು ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಅವರ ಈ ಮಾತುಗಳೇ ಪ್ರೇರಣೆ. ಎಲ್ಲರೂ ಉತ್ತಮರಾಗಬೇಕು ಹಾಗೂ ಉಪಕಾರಿಗಳಾಗಬೇಕು ಎಂಬುದೇ ಅವರ ಸಂದೇಶದ ಸಾರ.
ಯುವಜನರು ಕ್ರಿಯಾಶೀಲರೂ, ಶಕ್ತಿವಂತರೂ, ಸಮಾಜೋಪಯೋಗಿಗಳೂ ಆಗಬೇಕೆನ್ನುವುದು ಅವರ ಆಶಯವಾಗಿತ್ತು. ಅವರ ಜನ್ಮದಿನವಾದ ಜನವರಿ 12 ನ್ನು ಪ್ರತಿವರ್ಷವೂ ‘ರಾಷ್ಟ್ರೀಯ ಯುವದಿನ’ ಎಂದು ಆಚರಿಸಲಾಗುತ್ತಿದೆ.

 

ಉಪಕಾರಿಯಾಗು
-ಅಂದರೆ, ಸಮಾಜಕ್ಕೆ ಉಪಯೋಗವಾಗುವ ಯಾವುದಾದರೂ ಒಂದು ಕೆಲಸ ಮಾಡುವುದು. ಕೆಲವು ಉದಾಹರಣೆಗಳು ಹೀಗಿವೆ.
-ನೇತ್ರದಾನದ ಸಂಕಲ್ಪ ಮಾಡುವುದು
-ಕ್ಯಾಶ್‌ಲೆಸ್ ಅಥವಾ ಡಿಜಿಟಲ್ ವ್ಯವಹಾರದ ಕುರಿತು ಪ್ರಾತ್ಯಕ್ಷಿಕೆ ನೀಡುವುದು
-ಸ್ನೇಹಿತರೆಲ್ಲ ಸೇರಿ ಒಟ್ಟಾಗಿ ರಕ್ತದಾನ ಮಾಡುವುದು
-ನಮ್ಮ ಪರಿಸರದಲ್ಲಿ ಗಿಡ ನೆಟ್ಟು ಪೋಷಿಸುವುದು
-ಆಸ್ಪತ್ರೆಯಲ್ಲಿರುವ ಬಡರೋಗಿಗಳಿಗೆ ಸಹಾಯ ಮಾಡುವುದು
-ನಮ್ಮೂರಿನ ಶಾಲೆಗಳಲ್ಲಿರುವ ಕೊರತೆಗಳನ್ನು ಗಮನಿಸಿ, ಸಹಾಯ ಮಾಡುವುದು
-ದೇವಸ್ಥಾನ, ಶಾಲೆಯ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ನಡೆಸುವುದು
-ದುಶ್ಚಟಗಳ ಕುರಿತು, ಸ್ವಚ್ಛತೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು
-ಸ್ವದೇಶಿ, ಖಾದಿ ವಸ್ತುಗಳ ಬಳಕೆಯ ಸಂಕಲ್ಪ

See also  ಜಿನಾಲಯ ಅಭಿಯಾನ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?