Avyaktha Vachanagalu Daivaradane – ದೈವಾರಾಧನೆ

Share this


ನಿನ್ನ ಇಷ್ಟಾರ್ಥ ಸಿದ್ದಿಗೆ ಪೂಜೆ ಸಲ್ಲ
ದೇವರ ಇಷ್ಟಾರ್ಥ ಸಿದ್ದಿಗೆ ಪೂಜೆ ಅನಿವಾರ್ಯ
ನಿನ್ನ ಇಷ್ಟಾರ್ಥ ದೇವರ ಇಷ್ಟಾರ್ಥ ಆಗಲೆಂದ ——————————————– ಅವ್ಯಕ್ತ

ಬೆವರಿಳಿಸಿ ಸಂಪಾದನೆ ಮಾಲ್ಪರು ದಡ್ಡರು
ಬುದ್ದಿ ಪ್ರಯೋಗಿಸಿ ಮಾಲ್ಪರು ಬುದ್ದಿವಂತರು
ಜಗದಿ ಬುದ್ದಿವಂತರ ಬದುಕಿನಿಂದ ಕಲಿಯೆಂದ ——————————————– ಅವ್ಯಕ್ತ

ಅನ್ಯರ ತಪ್ಪು ಕಾಂಬರು ನರಕಕ್ಕೆ ಸಾಗುತಿಹರು
ತನ್ನ ತಪ್ಪು ಕಾಂಬತ ಸ್ವರ್ಗಕ್ಕೆ ಸಾಗುತಿಹರು
ನೆಮ್ಮದಿ ಬಾಳಿನ ಮರ್ಮ ತಿಳಿದು ನಡೆಯೆಂದ ——————————————– ಅವ್ಯಕ್ತ

ನಿನ್ನಲ್ಲಿಹ ದೇವರ ನೀ ಕಾಣದಿರೆ
ದೇವಾಲಯಕ್ಕೆ ಹೋಗಿ ದೇವರ ಕಾಣುತಿರೆ
ಬದುಕು ನಿಂತ ನೀರಾಗಿ ನಾರುತಿಹುದು ——————————————————- ಅವ್ಯಕ್ತ

ನಿನ್ನ ನೀನು ದೇವರಿಗೆ ಕೊಡದಿರೆ
ನಿನ್ನಲ್ಲಿಹ ವಸ್ತು ದೇವರಿಗೆ ಕೊಡುತಿರೆ
ಪುಣ್ಯ ಪ್ರಾಪ್ತಿ ವಸ್ತುವಿಗೆ ನಿನಗಿಲ್ಲವೆಂದ ——————————————————– ಅವ್ಯಕ್ತ

ನನ್ನ ದೇಹದ ವಯಸ್ಸು ಅರಿತಿಹೆನು
ನನ್ನ ಆತ್ಮನ ವಯಸ್ಸು ಅರಿಯದಿಹೆನು
ಹಿರಿಯ ಕಿರಿಯ ಯಾರೆಂದು ಪೇಳು —————————————————– ಅವ್ಯಕ್ತ

ಹೊಟ್ಟೆ ತುಂಬಿದ ಪ್ರಾಣಿ ತೆಪ್ಪಗೆ ಬಿದ್ದಿಹುದು
ಮಾನವ ಮನದ ಹಸಿವಿಗೆ ನಿತ್ಯ ಒದ್ದಾಡುತಿಹನು
ಮಾನವ ಪ್ರಾಣಿ ಜೀವರಾಶಿಗಳಿಗಿಂತ ಕೀಳೆಂದು ತಿಳಿಸು ———————————– ಅವ್ಯಕ್ತ

ಅಡಿಪಾಯ ಇಲ್ಲದೆ ಕಟ್ಟಿದ ಕಟ್ಟಡ
ಬೇರುಗಳು ಇಲ್ಲದ ನೆಟ್ಟ ಮರ
ಮಾನವ ಬದುಕಿನ ಇತಿಶ್ರೀ ಬಾಳೆಂದ —————————————- ಅವ್ಯಕ್ತ

ಮಾನವ ಬದುಕಿಗೆ ಮೊದಲ ವಿದ್ಯೆ ದೇವಾಲಯ ಅಂದು
ಮಾನವ ಬದುಕಿಗೆ ಮೊದಲ ವಿದ್ಯೆ ವಿದ್ಯಾಲಯ ಇಂದು
ದೇವಾಲಯದ ದೇವರು ಕೊಡುವ ವಿದ್ಯೆ ಬದುಕಿಗೆ ಬೇಕೆಂದ ————————————— ಅವ್ಯಕ್ತ

ದೇವರ ನಿಷ್ಠಾವಂತ ಸೇವಕ ದೈವ
ನಡೆದಾಡುವ ದೇವರ ಸೇವಕ ದೈವ
ದೈವದ ಕೋಪ ದೋಷ ನಿನ್ನಸಂಪಾದನೆ ……………………………………ಅವ್ಯಕ್ತ

ಮನ ಮನೆಯಲ್ಲಿದ್ದ ದೈವ ನಾನು
ಬೀಡು ಅರಮನೆಯಲ್ಲಿದ್ದ ದೈವ ನಾನು
ಹೊರದಬ್ಬಿ ಜೈಲಿನಲ್ಲಿಟ್ಟರೆ ನಿನ್ನ ಕಾಯುವುದೆಂತು

ಮನ ಮೈದಾನದ ದೈವಸ್ಥಾನ ದೈವಕ್ಕೆ
ಬೆಳ್ಳಿಬಂಗಾರ ವಜ್ರವೈಡೂರ್ಯ ದೈವಸ್ಥಾನ ಸಲ್ಲ
ದೈವದ ಬಯಕೆ ಭಕುತರ ಬಯಕಯಗಳೆಂದ ………………………………..ಅವ್ಯಕ್ತ

ಸನ್ಮಾರ್ಗಿಗಳನ್ನು ಮಾತ್ರ ರಕ್ಷಿಪ
ದುರ್ಮಾರ್ಗಿಗಳನ್ನು ಮಾತ್ರ ಶಿಕ್ಷಿಪ
ಅವ್ಯಕ್ತ ಶಕ್ತಿಯೇ ದೈವವೆಂದ ………………………………………………….ಅವ್ಯಕ್ತ

ದೈವದ ಮರ್ಮವ ಅರಿಯದೆ
ಪ್ರತಿಷ್ಠೆ ದೈವಾರಾಧನೆ ಮಾಳ್ಪಪೊಡೆ
ಮೂಢನಂಬಿಕಿಗೆ ಸಂಪತ್ತು ಪೋಲೆಂದ …………………………………………ಅವ್ಯಕ್ತ

ಮೂರು ದಶಕಗಳ ಉಪವಾಸದ ದೈವ
ತನ್ನ ಮುಂದಿನ ಯಜಮಾನನ ರಕ್ಷಿಸೆ
ಶ್ರದ್ದೆ ನಂಬಿಕೆ ಸನ್ಮಾರ್ಗ ಸಾಕೆಂದ ……………………………………………..ಅವ್ಯಕ್ತ

ಒಡೆದ ಮನೆ ಕುಟುಂಬ ಊರು ಮಿಲನಕ್ಕೆ
ದೈವದ ಉಗ್ರ ಸ್ವರೂಪ ಜಗದಿ ಪ್ರದರ್ಶನ
ಪೂರ್ವಜರು ದೈವಕ್ಕೆ ಕೊಟ್ಟೆ ಆದೇಶದ ಪಾಲನೆಯೆಂದ …………………………ಅವ್ಯಕ್ತ

ತ್ಯಾಗಿಗಳ ರಕ್ಷಿಪರು ಶ್ರಾವಕರು ಸಂಸಾರಿಗಳು
ಶ್ರಾವಕರ ಸಂಸಾರಿಗಳ ರಕ್ಷಿಪರು ದೈವಗಳು
ದೈವಗಳ ಸ್ಥಾನಮಾನ ತ್ಯಾಗಿಗಳಿಗೆ ಬೇಡವೆಂದ ………………………………..ಅವ್ಯಕ್ತ

ಸನ್ಮಾರ್ಗದಿ ನಡೆಯುವ ಮಾನವ ಬಂದುಗಳ
ದೈವ ದೇವರು ಕೈಹಿಡಿದು ಮುನ್ನಡೆಸುತಿಹರು
ದೈವ ದೇವರ ಕೋಪಕ್ಕೆ ತುತ್ತಾಗದಿರು …………………………………………..ಅವ್ಯಕ್ತ

See also  ದೈವ ನರ್ತಕನ ಪಾತ್ರ ಮತ್ತು ಕರ್ತವ್ಯ - ಉದ್ಯಪ್ಪ ಅರಸು ಶುಭಾಕರ ಹೆಗ್ಗಡೆ

ವೇದಿಕೆಗೆ ಸೀಮಿತವಾದ ಪಾಠ ಬೋಧನೆ ಭಾಷಣ
ಬದುಕಿಗೆ ಅಪಕ್ವವಾದ ಪಾಠ ಬೋಧನೆ ಭಾಷಣ
ದೈವ ದೇವರ ಪ್ರಜಾಪದ್ಧತಿ ಬದುಕಿನ ಸಮಾಧಿಯೆಂದ ……………………………ಅವ್ಯಕ್ತ

Leave a Reply

Your email address will not be published. Required fields are marked *

error: Content is protected !!! Kindly share this post Thank you