ಹಣ ಅವಕಾಶ ಬುದ್ದಿವಂತಿಗೆ ಒಟ್ಟುಗೂಡಿದರೆ ಮಾತ್ರ ಬೇಕಾದುದನ್ನು ಸಾದಿಸಬಹುದು – ಆದರೆ ಅದು ಒಬ್ಬೊಬ್ಬರಲ್ಲಿ ಒಂದೊಂದು ಸೇರಿಕೊಂಡಿದ್ದು ಫಲ ಕಾಣದಿದ್ದಾಗ ಚುನಾಯಿತ ಬೇರೆ ಬೇರೆ ಪಕ್ಸದವರು ಆಡಳಿತ ಸಿದ್ದಂತವನ್ನು ಗಾಳಿಗೆ ತೂರಿ ಒಂದಾದಂತೆ – ನಾವು ಕೂಡ ನಮ್ಮತನದಲ್ಲಿ ಅನಿವಾರ್ಯವಾಗಿ ಒಂದಾಗಿ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದು ಮೂರೂ ಜನರು – ಹಣ ಅವಕಾಶ ಬುದ್ದಿವಂತಿಗೆ – ಒಟ್ಟಾಗಿ ಮಾಡುವ ಕೆಲಸವೆ ಕೆಲಸದ ಪಾಲುದಾರ ವ್ಯವಸ್ಥೆ ಜನನಕ್ಕೆ ಕಾರಣವಾಗಿದೆ. ಬಾಹ್ಯ ಪ್ರಪಂಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ರೀತಿಯಲ್ಲಿ ಆನ್ಲೈನ್ ಇಲ್ಲಿ ಕೂಡ ಈ ತೆರನಾದ ವ್ಯವಸ್ಥೆ ಇದ್ದು – ತಾನೇ ಸ್ವತಃ ವೆಬ್ ಹೊಂದಿಯೇ ತನ್ನ ಯೋಜನೆಗಳ ಕಾರ್ಯಗತ ಮಾಡಬೇಕಾಗಿಲ್ಲ. ಈ ತೆರನಾದ ವ್ಯವಸ್ಥೆ ಇದೆ ಎಂಬುದನ್ನು ಜನಸಾಮಾನ್ಯರಿಗೆ ತಿಳಿಯಪಡಿಸುತ್ತ – ತನ್ನ ಯೋಚನೆ ಯೋಜನೆಗಳನ್ನು ಮನದ ಅಗ್ನಿಕುಂಡದಲ್ಲಿ ಹೊತ್ತಿ ಉರಿಸುವ ಬದಲು ಆನ್ಲೈನ್ ಕುಂಡದಲ್ಲಿ ನೆಟ್ಟು ಬೆಳೆಸಿ – ಫಲ ನೀವು ನಾವು ಒಟ್ಟಾಗಿ ತಿಂದು ಸುಖ ಶಾಂತಿ ನೆಮ್ಮದಿ ಬಾಳಿಗೆ ನಾಂದಿ ಹಾಡೋಣ