Avyaktha Vachanagalu

ಶೇರ್ ಮಾಡಿ

ದೇವರ ನಡೆ ಪಾಲಿಸದಿದ್ದೊಡೆ
ದೈವದ ಭಯ ಇಲ್ಲದಿದ್ದೊಡೆ
ದೇವಾಲಯಕ್ಕೊಂದು ನ್ಯಾಯವಾದಿ ಲೇಸೆಂದ ……………………………. ಅವ್ಯಕ್ತ

ವಾಸ್ತು ಜ್ಯೋತಿಷ್ಯ ತಂತ್ರಿ ಪೂಜೆ
ಅರ್ಚಕರ ವ್ಯಾಪಾರ ಕೇಂದ್ರದ ವಿಭಾಗ
ಜನರ ಬದುಕು ಅವಸಾನಕ್ಕೆ ದಾರಿಯೆಂದ ………………………………… ಅವ್ಯಕ್ತ

ಜೈನರು ಜಾತಿ ಭೇದದ ಹೊರಗಿಹರು
ಉತ್ತಮ ಸಂಸ್ಕಾರ ವೇದಿಕೆ ಜನಕರು
ದೇವರ ಬಂದುಗಳ ದೂರ ತಳ್ಳುತಿಹರು ………………………………ಅವ್ಯಕ್ತ

ಅಷ್ಟಮಂಗಲ ಮೂರುದಿನ ಎಂಬುತಿಹರು
ಅಷ್ಟಮಂಗಲ ಹನುಮಂತನ ಬಾಲದಂತಿಹುದು
ಅಷ್ಟಮಂಗಲಕ್ಕೆ ಇತಿಮಿತಿ ಲೇಸೆಂದ ……………………………………….ಅವ್ಯಕ್ತ

ಶಕ್ತಿ ಪ್ರತಿಷ್ಠೆ ಭಾವ ಪ್ರತಿಷ್ಠೆ ತಂತ್ರ ಪ್ರತಿಷ್ಠೆ ಇಹುದು
ಮೊದಲ ಎರಡು ಪ್ರತಿಷ್ಠೆ ವೆಚ್ಚ ರಹಿತ ಪ್ರತಿಷ್ಠೆ ಮರೆತಿಹರು
ಜನರ ಪಾಲಿಗೆ ಬಾಧಿಪ ತಂತ್ರ ಪ್ರತಿಷ್ಠೆ ಯಾಕಯ್ಯ ………………………… ಅವ್ಯಕ್ತ

ಅರಸರ ಆಡಳಿತ ದೈವ ದೇವರ ಆಡಳಿತ
ಸೇವಕರ ಆಡಳಿತ ದೈವ ದೇವರು ನಗಣ್ಯ
ದೈವ ದೇವರ ಅಭಯ ಆಶೀರ್ವಾದ ಸಿಗುವುದೆಂತು ……………………….. ಅವ್ಯಕ್ತ

See also  Avyaktha Vachanagalu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?