ದೇವಾಲಯಗಳ ಬುಲೆಟಿನ್ – Temples Bulletin

ಶೇರ್ ಮಾಡಿ

ದೇವರು ಇರುವ ಸ್ಥಳ ದೇವಾಲಯ. ಬೇರೆ ಬೇರೆ ಜಾತಿಯವರಿಗೆ ಬೇರೆ ಬೇರೆ ದೇವಾಲಯವಿದ್ದು ಕೆಲವೆ ಜಾತಿಯವರ ದೇವಾಲಯದ ಸಮಗ್ರ ಪರಿಚಯದ ವ್ಯವಸ್ಥೆ ಹೊಂದಿ- ಹೆಚ್ಚಿನ ಜಾತಿಯವರ ದೇವಾಲಯಗಳ ಪರಿಚಯವನ್ನು ಮಾಡಬೇಕಾಗಿರುತದೆ. ಈ ನಿಟ್ಟಿನಲ್ಲಿ ದೇವಾಲಯಗಳ ಆಡಳಿತಗಾರರು ಪಡಬಾರದ ಕಷ್ಟ ಪಡುತ್ತಿರುವುದು ವಾಸ್ತವ. ದೇವರ ದೇವಾಲಯಗಳ ಕೆಲಷ ಪವಿತ್ರವೆಂದು ಅರಿತ ಜನರಿದ್ದ ಅಂದು ಸೇವಾ ರೂಪದಲ್ಲಿ ಏಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ಸಾಗುತಿತ್ತು. ಬದಲಾದ ಇಂದು ವ್ಯಾಪಾರಿ ಮನೋಭಾವನೆ ವ್ಯಾಪಕವಾಗಿದ್ದು – ಸಂಪನ್ಮೂಲದ ಕೊರತೆಯೊಂದಿಗೆ ಮನೆ ಮನೆಗೆ ದೇವಾಲಯದಲ್ಲಿ ನಡೆಯುವ ಸಕಲ ಕಾರ್ಯಕ್ರಮಗಳ ಆಮಂತ್ರಣ ಪತ್ರ ಕಳುಹಿಸುವುದು ಇತ್ಯಾದಿ …… ತುಂಬಲಾರದ ಹೊರೆ, ಭಕ್ತಾದಿಗಳ ಕೊರತೆ, ನನ್ನ ಅದಿಕಾರದ ಅವಧಿ ಮುಗಿದ ತಕ್ಷಣ ಬೆನ್ನು ತೋರಿಸುವವರು – ವಾಸ್ತವ – ಉನ್ನತ ಸಂಸ್ಕಾರ ರೂಪಿಸುವ ಏಕಮಾತ್ರ ಸ್ಥಳ – ನಿಜ ರೂಪದ ವಿದ್ಯಾ ಸಂಸ್ಥೆ – ಮಾನವರ ಮುಂದಿಟ್ಟ ಮೊರೆ ವ್ಯರ್ಥವಾಗಿ – ಅಸಹಾಯಕ ಮೊರೆ ದೇವರ ಮುಂದಿಡುವುದು – ನಿಮ್ಮ ನಮ್ಮೆಲ್ಲರ ಅವ್ಯಕ್ತ ದ್ವನಿ.
ಅರಸರ ಕಾಲದಲ್ಲಿ ಆಡಳಿತ ಮತ್ತು ಖರ್ಚು ವೆಚ್ಚವನ್ನು ಅರಸರೆ ನೋಡಿಕೊಳ್ಳುತ್ತಿದ್ದು, ಪ್ರಜಾಪದ್ಧತಿ ಅಳವಡಿಸಿದ ನಾವು ಅರಸರ ಜವಾಬ್ದಾರಿ ಅಂದರೆ ಆಡಳಿತ ಮತ್ತು ದೇವಾಲಗಳ ಖರ್ಚು ವೆಚ್ಚವನ್ನು ಸರಕಾರ ಬರಿಸಬೇಕಾಗಿತ್ತು.ವಾಸ್ತವ ಸ್ಥಿತಿ ಅರಿತ ನಾವು ದೇವಾಲಯಗಳ ಸಮಗ್ರ ಅಭಿವೃದ್ಧಿ ಸಂಕಲ್ಪ ಮಾಡಿ ನಮ್ಮ ಪಾಲಿನ ಸೇವೆ ಮಾಡೋಣ.
ದೇವಾಲಯದ ಒಂದು ಭಾವಚಿತ್ರ ಮತ್ತು ೫೦ ಪದಗಳ ಮಿತಿ ವಿವರಣೆ ಕಳುಹಿಸಿ ಪುಕ್ಕಟೆ ಪ್ರಕಟಣೆಗೆ ಸಹಕರಿಸಿ
ದೇವಾಲಯದ ಸಂಕ್ಷಿಪ್ತ ಸಮಗ್ರ ಮಾಹಿತಿ ಬುಲ್ಲೆಟಿನಿನಲ್ಲಿ ಪ್ರಕಟಿಸಿ ಊರಿನ ದೇವಾಲಯ ಜಾಗತಿಕ ದೇವಾಲಯವಾಗಲಿ
ದೇವರು ಮತ್ತು ದೇವಾಲಯದ ಅಗತ್ಯತೆ ಬಗ್ಗೆ ಜಾಗ್ರತಿ ಮೂಡಿಸೋಣ
ಸಂಸ್ಕಾರ ರೂಪಿಸುವ ಶಿಕ್ಸಣ ಸಂಸ್ಥೆಗಳು ದೇವಾಲಯವೆಂದು ಸಾರೋಣ
ಒಂದು ಅಂದಾಜಿನ ಪ್ರಕಾರ ಏಲ್ಲಾ ಮತೀಯರ ಸುಮಾರು ೫೦,೦೦೦ ದಿಂದ ಹೆಚ್ಚು ದೇವಾಲಯಗಳು ಕರ್ನಾಟಕದಲ್ಲಿವೆ. ಪ್ರತಿ ದೇವಾಲಯಕ್ಕೊಂದು ಬುಲೆಟಿನ್ ಪ್ರಕಟಿಸುವುದಾದರೆ ೫೦,೦೦೦ ಉದ್ಯೋಗಗಳು ಸೃಷ್ಟಿಯಾಗಿ ಮಾನವರ ಏಳಿಗೆ ದೇವೆರ ಜೊತೆ ಜೊತೆಗೆ ಆಗುವುದು ಕಟು ಸತ್ಯ.
ಆದರೆ ಅದು ಹೇಗೆ ಸಾಧ್ಯ?
ದೇವಾಲಯದ ಅಸ್ತಿ ಭಕುತರು. ಅವರ ಸಂಖ್ಯೆ ವೃದ್ಧಿಸಿ.
ದೇವಾಲಯದಲ್ಲಿ ವ್ಯಯಕ್ತಿಕ ಪೂಜೆಯಿಂದ ಸಾಮೂಹಿಕ ಒಂದೇ ಪೂಜೆಗೆ ಒತ್ತು
ಉದ್ದಿಮೆದಾರರಲ್ಲಿ ದೇವಾಲಯಕ್ಕೆ ಪಾಲು( ೧೦%) ಪ್ರರೇಪಿಸಿ. ಅದು ನಿಜವಾದ ಉದ್ಯಮಕ್ಕೆ ವಿಮೆ
ವ್ಯಾಪಾರ ನೀತಿ ಅತ್ಯುತ್ತಮ ಆಡಳಿತ ವ್ಯವಸ್ಥೆ, ಜಮಾ ಖರ್ಚು ಸರಿದೂಗಿಸಲು ಸಹಕಾರಿ
ದೇವಾಲಯದಿಂದ – ದೇವರಲ್ಲಿಗೆ
ಜಗತ್ತಿನ ಅತಿ ದೊಡ್ಡ ಸಂಸ್ಥೆ ದೇವರು (ದೇವಾಲಯ)
ಆವಿಸ್ಕಾರಕ್ಕೆ ಚಾಲನೆ – ಪರೋಕ್ಷ ಪೂಜೆ ಇತ್ಯಾದಿ
ದೇವಾಲಯದಲ್ಲಿ ಉದ್ಯೋಗ ಸೃಷ್ಟಿ ದೇವಾಲಯದ ಅಭಿವೃದ್ಧಿಗೆ ನಾಂದಿ
ಬುಲ್ಲೆಟಿನಿನಿಂದಲೆ ದೇವಾಲಯದ ಪ್ರತಿ ಕಾರ್ಯಕರಮಗಳ ಆಮಂತ್ರಣ ಕ್ಷಣ ಮಾತ್ರದಲ್ಲಿ ಜಗತ್ತಿಗೆ ಕಳುಹಿಸೋಣ
ವಿದ್ಯೆಗೆ ಖರ್ಚು ಮಾಡುವುದರಲ್ಲಿಶೇಕಡಾ ೫೦% ಸಂಸ್ಕಾರಕ್ಕಾಗಿ ವೆಚ್ಚ ಮಾಡಿ – ಅದುವೆ ದೇವಾಲಯಕ್ಕೆ
ದೇವಾಲಯಗಳು ಕಟ್ಟಡಗಳ ಅರಮನೆ ಅಲ್ಲ – ಅದು ಸಂಸ್ಕಾರವಂತರ ಅರಮನೆ ಎಂದು ಸಾರೋಣ.
ದೇವಾಲಯದಲ್ಲಿ ಪೂಜೆಗೊಬ್ಬ – ಸಂಪಾದನೆಗೊಬ್ಬ ಕಮಿಷನ್ ಆಧಾರದಲ್ಲಿ ಕೆಲಸ ಕೊಡೋಣ ಅವನೇ ದೇವಾಲಯದ ಬುಲೆಟಿನ್ ನಡೆಸಲಿ.
ಈ ನಿಟ್ಟಿನಲ್ಲಿ ಎರಡು ಅವ್ಯಕ್ತ ವಚನಗಳು

See also  ವಂಶ ವೃಕ್ಷ ಬುಲ್ಲೆಟಿನಿನ ಪ್ರಕಟಣೆಗೆ ವಿಭಿನ್ನ ಪ್ರಕಾರಗಳು

ಮನಮೈದಾನದಿ ದೇವಾಲಯ ಕಟ್ಟಿ
ಬುದ್ದಿಯ ಸುತ್ತುಗೋಪುರ ಕಟ್ಟಿದಾತ
ನಡೆದಾಡುವ ದೇವಾಲಯದಲ್ಲಿಹನು …………………..ಅವ್ಯಕ್ತ

ಮನದಿ ಪೂಜಿಪರು ದೇಹಾದಿ ಪೂಜಿಪರು
ಪುಷ್ಪದಿ ಪೂಜಿಪರು ದ್ರವ್ಯದೀ ಪೂಜಿಪರು
ಪೂಜಿಪ ನಿಜ ವಿದಿ ಪೇಳೆಂದ…………………………..ಅವ್ಯಕ್ತ
ಕಿತ್ತು ತಿನ್ನುವವರು – ಹಂಚಿ ತಿನ್ನುವವರು – ಕೊಟ್ಟು ತಿನ್ನುವವರ ಆಯ್ಕೆ ನಮ್ಮದಾಗಲಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?