ಹೊಸದಾಗಿ ಏನಾದ್ರೂ ಮಾಡ್ಬೇಕು ಗುರೂ! ಕನಕಾಂಬರ ಬೆಳೆದು ಲಾಭ ಗಳಿಸಿದ ಕೃಷಿಕ

ಶೇರ್ ಮಾಡಿ

ಹೊಸದಾಗಿ ಏನಾದ್ರೂ ಮಾಡ್ಬೇಕು ಗುರೂ! ಕನಕಾಂಬರ ಬೆಳೆದು ಲಾಭ ಗಳಿಸಿದ ಕೃಷಿಕ

ವಿವಿಧ ಬಗೆಯ ಹೂವಿನ ಕೃಷಿ ರೈತರಿಗೆ ಲಾಭದ ಮಳೆ ತರುತ್ತಿದೆ. ಈ ಕನಕಾಂಬರ ಹೂವಿನ ಕೃಷಿಯಿಂದ ಉತ್ತಮ ಲಾಭ ಸಿಗುತ್ತಿದೆ ಎನ್ನುತ್ತಾರೆ ರೈತರು. ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯ ನಂದಿಕೋಟ್ಕೂರು ವ್ಯಾಪ್ತಿಯ ತಂಗಡಂಚ ಗ್ರಾಮದಲ್ಲಿ ಶಿವಚಂದ್ರು ಎಂಬ ರೈತ ಕನಕಾಂಬರಗಳನ್ನು ಬೆಳೆ ಸರದಿ ಪದ್ಧತಿಯಲ್ಲಿ ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ. ಕನಕಾಂಬರ ಹೂಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಅವುಗಳ ಕೃಷಿಯಿಂದ ಈ ರೈತ ಲಾಭ ಗಳಿಸುತ್ತಿದ್ದಾರೆ. ಜೋಳ, ರಾಗಿ, ರಾಗು, ಗೋಧಿ ಮುಂತಾದ ಬೆಳೆಗಳನ್ನು ಬೆಳೆದು ನಷ್ಟ ಹೊಂದಿದ ನಂತರ ಶಿವಚಂದ್ರು ಅವರು ಹೂವಿನ ಕೃಷಿಯತ್ತ ಒಲವು ತೋರಿರುವುದಾಗಿ ತಿಳಿಸಿದ್ದಾರೆ.

ಈ ಹೂವಿನ ಕೃಷಿಯಿಂದ ನಷ್ಟದ ಭೀತಿ ಕಡಿಮೆಯಾಗಿ ಪ್ರತಿದಿನ ಮಾರುಕಟ್ಟೆಗೆ ಹೂಗಳನ್ನು ರಫ್ತು ಮಾಡಬಹುದಾಗಿದ್ದು, ದಿನಂಪ್ರತಿ ಲಾಭವನ್ನೂ ಕಾಣಬಹುದು ಎಂದು ಅವರು ತಿಳಿಸಿದ್ದಾರೆ. ಸಾವಯವ ಪದ್ಧತಿಯಲ್ಲಿ ಈ ಹೂಗಳನ್ನು ಬೆಳೆಸಲಾಗಿದೆ. ಸಗಣಿ, ಗೋಮೂತ್ರ, ಬೇವಿನ ಎಣ್ಣೆ, ಗೊಬ್ಬರವನ್ನು ಗಿಡಗಳಿಗೆ ಹಾಕಲಾಗುತ್ತಿದೆ ಎನ್ನುತ್ತಾರೆ ರೈತ ಶಿವಚಂದ್ರ. ಒಟ್ಟಾರೆ ಸಾಂಪ್ರದಾಯಿಕ ಧಾನ್ಯಗಳಿಗಿಂತ ಕನಕಾಂಬರ ಹೂವನ್ನು ಬೆಳೆದು ಲಾಭ ಗಳಿಸುತ್ತಿರುವ ಟ್ರೆಂಡ್ ಈ ಭಾಗದಲ್ಲಿ ಹೆಚ್ಚುತ್ತಿದೆ ಎಂದು ವರದಿಯಾಗಿದೆ.

See also  Kehava Gowda Alekki - Ichilampady - Daksha communication

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?