
ಪರಿಚಯ:
 . “ಗೇರು ಕೃಷಿ ಅಭಿಯಾನ”ದ ಮೂಲಕ ರೈತರಿಗೆ ತಾಂತ್ರಿಕ ಸಹಾಯ, ಉತ್ತಮ ತಳಿ ಗಿಡಗಳು, ಆಧುನಿಕ ನೀರಾವರಿ ಪದ್ಧತಿ, ಮೌಲ್ಯವರ್ಧನೆ ತಂತ್ರಜ್ಞಾನ, ಮಾರುಕಟ್ಟೆ ಸಂಪರ್ಕ ಒದಗಿಸುವುದೇ ಉದ್ದೇಶ.
ಅಭಿಯಾನದ ಉದ್ದೇಶಗಳು:
- ರೈತರಿಗೆ ಗೇರು ಬೆಳೆಸುವ ಬಗ್ಗೆ ವೈಜ್ಞಾನಿಕ ಅರಿವು ನೀಡುವುದು. 
- ಉತ್ತಮ ತಳಿ (varieties)ಗಳನ್ನು ಪ್ರಚಾರ ಮಾಡುವುದು. 
- ಸಾವಯವ ಗೊಬ್ಬರ ಬಳಕೆ ಉತ್ತೇಜಿಸಿ, ಮಣ್ಣಿನ ಆರೋಗ್ಯ ಕಾಪಾಡುವುದು. 
- ಹನಿನೀರಾವರಿ (drip irrigation) ಬಳಸಿ ನೀರಿನ ಉಳಿತಾಯ. 
- ಗೇರು ತೋಟದಲ್ಲಿ ಅಂತರ ಬೆಳೆ (ಬಾಳೆ, ಮೆಣಸು, ಅನಾನಸ್, ಅರೇಕೆ) ಬೆಳೆಸಲು ಉತ್ತೇಜಿಸುವುದು. 
- ಕೀಟ ಮತ್ತು ರೋಗ ನಿರ್ವಹಣೆಯ ಬಗ್ಗೆ ತರಬೇತಿ ನೀಡುವುದು. 
- ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು. 
- ರೈತರ ಸಹಕಾರಿ ಸಂಘಗಳ ಮೂಲಕ ಸಾಮೂಹಿಕ ಬಲವರ್ಧನೆ ಮಾಡುವುದು. 
ಗೇರು ಕೃಷಿಯ ತಾಂತ್ರಿಕ ಮಾಹಿತಿ:
- ಭೂಮಿ ಆಯ್ಕೆ: ನೀರು ನಿಲ್ಲದ, ಆಳವಾದ, ಸಾದುಮಣ್ಣು ಸೂಕ್ತ. 
- ಗಿಡ ನಾಟಿ ಸಮಯ: ಮಳೆಗಾಲದ ಆರಂಭ (ಜೂನ್–ಜುಲೈ) ಉತ್ತಮ. 
- ಅಂತರ: ಸಾಮಾನ್ಯವಾಗಿ 2.7 ಮೀ x 2.7 ಮೀ, ಸಣ್ಣ ತಳಿ 2.1 ಮೀ x 2.1 ಮೀ. 
- ಗೊಬ್ಬರ: ಪ್ರತಿ ಗಿಡಕ್ಕೆ ವಾರ್ಷಿಕವಾಗಿ ಸಾವಯವ ಗೊಬ್ಬರ (10-15 ಕೆಜಿ) ಜೊತೆಗೆ ಯೂರಿಯಾ, ಸೂಪರ್ ಫಾಸ್ಫೇಟ್, ಮೂರಿಯೇಟ್ ಆಫ್ ಪೋಟಾಶ್ ಸಮತೋಲನವಾಗಿ. 
- ನೀರಾವರಿ: ಹನಿನೀರಾವರಿ ಅತ್ಯುತ್ತಮ – 40-50% ನೀರಿನ ಉಳಿತಾಯ. 
- ಅಂತರ ಬೆಳೆ: ಬಾಳೆ, ಮೆಣಸು, ಅನಾನಸ್, ಹಸಿರು ಗೊಬ್ಬರ ಬೆಳೆ. 
ಅಭಿಯಾನದ ಪ್ರಯೋಜನಗಳು:
 ರೈತರ ಆದಾಯದಲ್ಲಿ ಸ್ಥಿರತೆ
 ಗ್ರಾಮೀಣ ಉದ್ಯೋಗಾವಕಾಶಗಳ ಸೃಷ್ಟಿ
 ಮಾರುಕಟ್ಟೆ ಸಂಪರ್ಕದಿಂದ ಉತ್ತಮ ಬೆಲೆ
 ಮಣ್ಣಿನ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ
 ರೈತರ ಸಂಘಟಿತ ಶಕ್ತಿ ವೃದ್ಧಿ
ಅಭಿಯಾನದ ಘೋಷವಾಕ್ಯಗಳು:
- “ಗೇರು ತೋಟವೇ ರೈತನ ಬಲ” 
- “ಗೇರು ಬೆಳೆಯಿರಿ, ಲಾಭ ಗಳಿಸಿ 
- “ಸಾವಯವ ಗೇರು – ಆರೋಗ್ಯಕರ ಸಮಾಜ” 
- “ಪ್ರತಿ ತೋಟದಲ್ಲಿ ಗೇರು – ಪ್ರತೀ ಮನೆಯಲ್ಲಿ ಸಮೃದ್ಧಿ” 
- ಮನೆಗೊಂದು ಗೇರು ಗಿಡ
- ಗೇರುಹಣ್ಣಿನ ರಸದಿಂದ ಜ್ಯೂಸ್ ಮದ್ದು ಇತ್ಯಾದಿಗಳ ಆವಿಸ್ಕಾರ
- ಗೇರು ಮರದಲ್ಲಿ ಕರಿಮೆಣಸು ಕೃಷಿ ಅಭಿಯಾನದಲ್ಲಿ ಪಾಲ್ಗೊಳ್ಳುವುದರಿಂದ ನಮಗೆ ಆಗುವ ಪ್ರಯೋಜನಗಳು- ಹೊಸ ತಾಂತ್ರಿಕ ಜ್ಞಾನ ಮತ್ತು ಕೃಷಿ ವಿಧಾನಗಳನ್ನು ಕಲಿಯಲು ಸಾಧ್ಯ. 
- ಉತ್ತಮ ತಳಿ ಗಿಡಗಳು ಮತ್ತು ಗುಣಮಟ್ಟದ ಬೀಜಗಳನ್ನು ಪಡೆಯಲು ಸಹಾಯ. 
- ಸಾವಯವ ಗೊಬ್ಬರ, ಹನಿನೀರಾವರಿ ಮುಂತಾದ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ. 
- ಕೀಟರೋಗ ನಿರ್ವಹಣೆಯ ಬಗ್ಗೆ ತಜ್ಞರಿಂದ ಮಾರ್ಗದರ್ಶನ. 
- ಮಾರುಕಟ್ಟೆ ಸಂಪರ್ಕದಿಂದ ಉತ್ತಮ ಬೆಲೆ ಪಡೆಯುವ ಅವಕಾಶ. 
- ಮೌಲ್ಯವರ್ಧಿತ ಉತ್ಪನ್ನ ತಯಾರಿಕೆಯಿಂದ ಹೆಚ್ಚುವರಿ ಆದಾಯ. 
- ರೈತರ ನಡುವೆ ಸಹಕಾರ, ಸಂಘಟನೆ ಮತ್ತು ಪರಸ್ಪರ ಅನುಭವ ಹಂಚಿಕೊಳ್ಳುವ ಅವಕಾಶ. 
- ಕೃಷಿ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳ ಸೃಷ್ಟಿ. 
- ಪರಿಸರ ಸ್ನೇಹಿ ಕೃಷಿಯಿಂದ ಮಣ್ಣು, ನೀರು, ಪ್ರಕೃತಿ ಸಂಪನ್ಮೂಲಗಳ ಸಂರಕ್ಷಣೆ. 
- ಕುಟುಂಬ ಹಾಗೂ ಸಮಾಜದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ನೆರವು. 
- ಗೇರು ಕೃಷಿಯಲ್ಲಿ ಪ್ರತಿ ಎಕ್ರೆ ತೋಟದಲ್ಲಿ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ನಿವ್ವಳ ಲಾಭ – ಸ್ವ ಅನುಭವ 
- ಗೇರು ಕೃಷಿಯೊಂದಿಗೆ ಕರಿಮೆಣಸು ಕೃಷಿ ಎಕ್ರೆಗೆ – ಗರಿಷ್ಠ ೩ ರಿಂದ ೪ ಲಕ್ಷ ಸಂಪಾದನೆ ಸಾಧ್ಯತೆ 
- ಕೃಷಿಕರಿಗೆ ಕಿವಿ ಮಾತು – ವಿಭಿನ್ನ ರೀತಿಯ ಆದಾಯ ಮೂಲ ನಿಮ್ಮದಾಗಲಿ 
- ಗೇರು ಮೌಲ್ಯ ವರ್ಧನೆ – ಗರಿಷ್ಠ ಸಂಪಾದನೆಗೆ ದಾರಿ