ಭಾರತೀಯ ಶಿಕ್ಷಣ ಪದ್ಧತಿ – ಸಂವಾದ

Share this

ನಮ್ಮ ದೇಶದಲ್ಲಿ ಪ್ರಸ್ತುತ ಇರುವ ಶಿಕ್ಷಣ ಪದ್ಧತಿ ಸರಿ ಇದೆಯಾ ?
ಇಲ್ಲ ಖಂಡಿತಾ ಸರಿ ಇಲ್ಲ . ಇದು ಅಕ್ಷರ ಜ್ಞಾನ ಕೊಡುವ ಕಾರ್ಖಾನೆ
ಹಾಗಾದರೆ ಶಿಕ್ಷಣ ಬಗ್ಗೆ ನೀವೇ ತಿಳಿಸಿ

ಹುಟ್ಟು ಸಾವು ನಡುವಿನ ಬದುಕಿನ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡುವುದೇ ಶಿಕ್ಷಣ
ಈ ಶಿಕ್ಷಣ ಪದ್ಧತಿ ಎಲ್ಲಿಂದ ಬಂತು?
ಇದು ನಮ್ಮನ್ನು ಆಳಿದ ಬ್ರಿಟಿಷರು ಬಿಟ್ಟು ಹೋದ ಅತಿ ಕೆಟ್ಟ ಕಾರ್ಖಾನೆಯಲ್ಲಿ ಒಂದು
ಸ್ವತಂತ್ರ ಬಂದು ಎಷ್ಟು ವರುಷ ಕಳೆದರು ಯಾಕೆ ಸರಿಯಾದ ಶಿಕ್ಷಣ ಪದ್ಧತಿ ಅಳವಡಿಸಿಲ್ಲ ?


ನಮ್ಮ ದೇಶದಲ್ಲಿ ೧೩೦ ಕೋಟಿ ಜನರು ೨೬೦ ಕೋಟಿ ಜನರ ಸ್ವಾತಂತ್ರಕ್ಕೆ ಹೋರಾಡುತಿದ್ದಾರೆ.ಅವರಿಗೆ ದೇಶದ ಬಗ್ಗೆ ಆಗಲಿ , ಶಿಕ್ಸಣ, ಆಡಳಿತ, ನ್ಯಾಯದಾನ ………ಬಗ್ಗೆ ಯೋಚನೆ ಮಾಡಲು ಸಮಯ ಸಿಗುವುದಿಲ್ಲ
ಹಾಗಾದರೆ ಪರಿಹಾರ ಇಲ್ಲವೇ ?
Macaulay ಸ್ಪೀಚ್ ೨/೨/೧೮೩೫ – ಇವರು ಅಂದು ಬ್ರಿಟಿಷ್ ಸಂಸತಿನಲ್ಲಿ ಮಾಡಿದ ಭಾಷಣ ಭಾರತದ ದಿಕ್ಕನೇ ತಿರುಗಿಸಿ ನಮ್ಮ ಅಧಪತನದ ಪ್ರಸ್ತುತ ಶಿಕ್ಷಣ ಪದ್ದತಿಗೆ ನಾಂದಿಯಾಯಿತು. ಆ ವ್ಯಕ್ತಿಗಿಂತ ನೂರು ಪಾಲು ಮಿಗಿಲಾದ ಜ್ಞಾನಿಗಳು ನಮ್ಮಲ್ಲಿದ್ದಾರೆ. ಅವರ ಮಾತುಗಳು ಅರ್ಥಪೂರ್ಣ ಎಂದು ಆಡಳಿತಕ್ಕೆ ಅರಿವಾದಾಗ ಖಂಡಿತಾ ಸಾಧ್ಯವಿದೆ.
ಶಾಲಾ ಶಿಕ್ಷಣ ಪದ್ಧತಿ ತಪ್ಪೇ ?


ತಪ್ಪು ಖಂಡಿತಾ ಅಲ್ಲ . ನಾವು ಯಾವ ರೀತಿಯ ಪ್ರಜೆಗಳನ್ನು ತಯಾರಿಸಿ ಸಮಾಜಕ್ಕೆ ಕಳುಹಿಸಬೇಕು ಎನ್ನುವ ಅರಿವು ಆ ಸಂಸ್ಥೆಗಳಿಗೆ ಗೊತ್ತಿರಬೇಕು.
ಎಲ್ಲಿ ತಪ್ಪು ಆಗುತ್ತಿದೆ ಎಂದು ನಿಖರವಾಗಿ ಹೇಳಿ ?
ಉತ್ತಮ ಸಂಸ್ಕಾರವಂತರನ್ನು ಸೃಷ್ಟಿಸಬೇಕು. ಇದಕ್ಕಾಗಿ ತಾನು ತಪ್ಪು ಮಾಡಿದರೆ , ಆದರೆ ಅದನ್ನು ಒಪ್ಪಿಕೊಳ್ಳುವ ಸಹಜ ಮಾನವ ಪ್ರವೃತಿ ಪ್ರಜೆಗಳಲ್ಲಿರಬೇಕು. ಇದು ಈ ದೇಶದಲ್ಲಿ ಯಾರಿಗೂ ಇಲ್ಲ. ತಪ್ಪು ಮಾಡಿದವರನ್ನು ಯಾರು ಕೂಡ ಕಾನೂನಿಂದ ರಕ್ಷಣೆ ಮಾಡುವ ಹಾಗಿಲ್ಲ. ಇದು ಇಲ್ಲಿ ನಿರಂತರ ನಡೆಯುತದೆ. ಇದರಿಂದಾಗಿ ಹುಲಿ ಮತ್ತು ದನಗಳನ್ನು ಒಂದೇ ಗೂಡಿನಲ್ಲಿ ಹಾಕಿದಂತಾಗಿದೆ ಮಾನವ ಬದುಕು.
ಇದು ಆಡಳಿತ ವೈಫಲ್ಯ . ಶಿಕ್ಸಣ ಪದ್ಧತಿ ಹೊಣೆ ಅಲ್ಲ
ಆಡಳಿತ ನಡೆಸುವವರು ಹೊರಗಿನವರು ಅಲ್ಲ . ನಮ್ಮವರೇ , ನಮ್ಮ ಶಾಲೆಯಲ್ಲಿ ಓದಿದವರೇ . ಅವರಿಗೆ ಸರಿಯಾದ ಶಿಕ್ಷಣ ದೊರೆತು ಮಾನವರಾಗಿ ಅಥವಾ ದೇವಮಾನವರಾಗಿ ಇರುತಿದ್ದರೆ ಸ್ವರ್ಗ ನಮ್ಮದಾಗುತಿತ್ತು. ಅದರ ಬದಲು ಕಿತ್ತು ತಿನ್ನುವ ರಾಕ್ಸಸರು ಹೊರಬರುತ್ತಿರುವುದು ನರಕ ಬದುಕಿಗೆ ಕಾರಣವಾಗಿದೆ ………………………………………………………….ಮುಂದುವರಿಯುವುದು

See also  ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಬರೆಮೇಲು ಇಚಿಲಂಪಾಡಿ ,ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Leave a Reply

Your email address will not be published. Required fields are marked *

error: Content is protected !!! Kindly share this post Thank you