Marriage Bulletin – ಮದುವೆ ಬುಲೆಟಿನ್

Share this

ಮದುವೆಯಲ್ಲಿ ಪ್ರೀತಿಸಿ ಆದ ಮದುವೆ, ಹಿರಿಯರ ಮುಂದಾಳತ್ವದಲ್ಲಿ ಮಾಡಿದ ಮದುವೆ , ಬಾಲ್ಯ ವಿವಾಹ ಎಂಬ ವಿಭಾಗಗಳಿದ್ದು – ಬಾಲ್ಯ ವಿವಾಹ ಕಾನೂನು ಬಾಹಿರವಾಗಿ ಅಸ್ತಿತ್ವ ಕಳೆದುಕೊಂಡಿದೆ. ಮಾನವ ಬದುಕಿನಲ್ಲಿ ಅತೀ ಪ್ರಾಮುಖ್ಯ ವಿಷಯಗಳ ಕುರಿತು ಶಿಕ್ಸಣವಾಗಲಿ ಸರಿಯಾದ ರೀತಿಯ ಮಾಹಿತಿಯಾಗಲಿ – ಇಲ್ಲದ ಕ್ಷೇತ್ರಗಳಾದ – ಪ್ರಧಾನಿ, ಮುಖ್ಯಮಂತ್ರಿ, ಸಂಸದ, ಶಾಸಕ, ಜನಪ್ರತಿನಿಧಿ ಜೊತೆಗೆ ಮದುವೆಯು ಕೂಡ ಸೇರಿದ್ದು – ಸುಖ ಶಾಂತಿ ನೆಮ್ಮದಿ ಬಾಳಿಗೆ – ವ್ಯಕ್ತಿಗಳೇ ಕಾರಣವೆಂಬ ಹಣೆಪಟ್ಟಿ ಕಟ್ಟುವ ಬದಲು ಸಮಾಜದ ಪ್ರಜೆಗಳಾದ ನಾವೆಲ್ಲರೂ ಬದ್ದರೆಂಬ ಅರಿವು ನಮಗೆ ಬೇಕಾಗಿದೆ.
ಪಕ್ಷಗಳಂತೆ ಜಾತಿಧರ್ಮಗಳು ಹುಟ್ಟಿಕೊಂಡಿದ್ದರು – ತಮ್ಮ ಮೂಲದ ಅರಿವಿಲ್ಲದೆ ಅವುಗಳು , ತಮ್ಮ ಕರ್ತವ್ಯ ಮರೆತು – ರಾಜಕೀಯ , ಶಿಕ್ಸಣ,ಆಸ್ಪತ್ರೆ ಮುಂತಾದ ತಮ್ಮದಲ್ಲದ ಕೆಲಸದಲ್ಲಿ ಮಗ್ನರಾಗಿ – ಧಾರ್ಮಿಕ ಬದುಕಿನ ಅರಿವಿನ ಶಿಕ್ಸಣ ಕೊರತೆ ನಮ್ಮನ್ನು ಕಾಡುತಿದೆ.
ಆಡಳಿತಕ್ಕೆ ಬೇಡವಾದದ್ದು – ಧರ್ಮಗುರುಗಳಿಗೆ ಆಸಕ್ತಿ ಇಲ್ಲದ್ದು – ಮಾನವ ಬದುಕಿಗೆ ಅನಿವಾರ್ಯವಾದದ್ದು – ಮಾಡುವವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿ ಉಳಿಯುವುದಕ್ಕೆ ಈ ವೇದಿಕೆ ಕೈಲಾದ ಸೇವೆಗೆ ಮುಂದಾಗಿದೆ
ಜೋಡೆತ್ತಿನ ಗಾಡಿಯಂತೆ ಮುನ್ನಡೆಯಬೇಕಾದ ಬದುಕು ಒಂಟಿ ಎತ್ತಿನ ಗಾಡಿಯಾಗಿ – ಮುಂದೆ ಅಸ್ತಿತ್ವವನ್ನೇ ಕಳೆದುಕೊಂಡ ಜೀವನ – ದುರಂತ ಮಾನವ ಬದುಕಿನ ಕತೆ – ಬಹುಪಾಲು ಗೋಚರಿಸುತಿರುವುದಕ್ಕೆ ಅಂತ್ಯ ಹಾಡಬೇಕಾಗಿದೆ.
ಮದುವೆ ಆದವರು ಒಟ್ಟಿಗೆ ಇದ್ದಾರೆ ಮಾತ್ರ ಸಾಲದು ಅವರು ಒಂದಾಗಿ ಬಾಳಿದಾಗ ಮಾತ್ರ ದಾಂಪತ್ಯ ಜೀವನಕ್ಕೆ ಅರ್ಥಬರುತದೆ. ಅದಕ್ಕೆ ಇಬ್ಬರ ತ್ಯಾಗ – ಮುನ್ನುಡಿ ಬರೆಯುತದೆ.
ಪ್ರಕೃತಿಯ ಮತ್ತು ದೇವರ ಕೊಡುಗೆ ಎರಡು ವ್ಯಕ್ತಿಗಳು ಒಂದೇ ರೀತಿಯಲ್ಲಿರಲು ಸಾಧ್ಯವಿಲ್ಲ . ಆದುದರಿಂದ ಹೊಂದಾಣಿಕೆ ಪದ ಜೀವನದುದ್ದಕ್ಕೂ ಅನಿವಾರ್ಯ. ಕೈಲಾಗದವನಿಗೆ ಕೋಪದ ಅಸ್ತ್ರ – ಎಂಬ ನಾಣ್ಣುಡಿಗೆ ಬಲಿಪಶುವಾಗಿ ಬದುಕಿಗೆ ಕೊಲ್ಲಿ ಇಡುವ ಕಾರ್ಯಕ್ಕೆ ಯಾವತ್ತು ಕೈಹಾಕಬಾರದು .

ಪತಿ ನಂಬದ ಸತಿ ಬಾಳು
ಸತಿ ನಂಬದ ಪತಿ ಬಾಳು
ಸುಖ ಶಾಂತಿ ನೆಮ್ಮದಿ ಬಲಿಗಿಟ್ಟ ಕಿಚ್ಚೆಂದ …………………………ಅವ್ಯಕ್ತ
ಸತಿ ಕೈಗೊಂಬೆಯಾದ ಪತಿ
ಪತಿ ಕೈಗೊಂಬೆಯಾದ ಸತಿ
ಜೀವಂತ ಶವಗಳೆಂದ …………………………………………………ಅವ್ಯಕ್ತ
ಮುಂದುವರಿಯುವುದು

See also  Inaugural function of Mallikarjuna Kala Sangha , Ichilampady

Leave a Reply

Your email address will not be published. Required fields are marked *

error: Content is protected !!! Kindly share this post Thank you